ಗ್ರಾಮಾಂತರ ಸುದ್ದಿ

ಜಯರಾಮ ಬಂಗೇರರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣೆ

ಗುರುವಾಯನಕೆರೆ: ದ.ಕ ಹಿ.ಪ್ರಾ ಶಾಲೆ ಗುರುವಾಯನಕೆರೆಯ ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಿನಕರ ಬಂಗೇರ ಅವರ ಸಹೋದರರಾದ ಜಯರಾಮ ಬಂಗೇರರವರು ಕೋವಿಡ್-19 ಕಾಯಿಲೆಯಿಂದ

 

ಸ್ವರ್ಗಸ್ಥರಾಗಿದ್ದು, ಅವರ ಸ್ಮರಣಾರ್ಥವಾಗಿ ಅನಂತ ಬಂಗೇರ ಹಾಗೂ ಕುಟುಂಬಸ್ಥರು ಗುರುವಾಯನಕೆರೆ ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್ ಪುಸ್ತಕ, ಪೆನ್, ಪೆನ್ನಿಲ್, ರಬ್ಬರ್‌ಗಳನ್ನು ವಿತರಿಸಿದರು.


ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಕೋವಿಡ್-19 ಸಂದಿಗ್ದ ಪರಿಸ್ಥಿತಿಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿ ಪ್ರೋತ್ಸಾಹಿಸಿದ ಅನಂತ ಬಂಗೇರ ಹಾಗೂ ಕುಟುಂಬಸ್ಥರಿಗೆ ಶಾಲಾ ಮುಖ್ಯೋಪಾಧ್ಯಾಯಿನಿಯವರು ಕೃತಜ್ಞತೆ ಸಲ್ಲಿಸಿದರು.

ನಿಮ್ಮದೊಂದು ಉತ್ತರ