ಕಳೆಂಜ: ಇಲ್ಲಿಯ ಕೆರೆಕೋಡಿ ನಿವಾಸಿ ಕೆ.ವಿ ಜೋಸೆಫ್ (ಶಾಜಿ)(45ವ) ರವರು ಹೃದಯಾಘಾತದಿಂದ ಅ.20 ನಿಧನರಾದರು.
ಅ.20 ರಂದು ಬೆಳಿಗ್ಗೆ ರಬ್ಬರ್ ಟ್ಯಾ
ಪಿಂಗ್ ಮಾಡುತ್ತಿರುವ ಸಂದರ್ಭ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಕಾಯರ್ತ
ಡ್ಕ ಖಾಸಗಿ ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟರು.
ಮೃತರು ಕಳೆಂಜ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯ ಮಾಜಿ ಕಾರ್ಯದ
ರ್ಶಿಯಾಗಿ, ಬಟ್ಯಾಲ್ ಚರ್ಚ್ ಸಂಡೇಸ್ಕೂಲ್
ಅಧ್ಯಾಪಕರಾಗಿ, ಬಟ್ಯಾಲ್ ಚರ್ಚ್ ಸಮಿತಿಯಸದಸ್ಯರಾಗಿ, ಕಾಯರ್ತಡ್ಕ ದಿವ್ಯಜ್ಯೋತಿ ಆಂಗ್ಲಮಾಧ್ಯಮ
ಶಾಲೆಯ ಪೋಷಕರ ಸಮಿತಿಯ ಸದಸ್ಯರಾ
ಗಿದ್ದರು. ಅಲ್ಲದೆ ಕಸ್ತೂರಿ ರಂಗನ್ ಹೋರಾಟ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿ
ಕೊಂಡಿದ್ದರು. ವಾಲಿಬಾಲ್ ಆಟಗಾರ
ರಾದ ಇವರುಶಿಬರಾಜೆ ಪಾದೆಯಲ್ಲಿ ಮಕ್ಕಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದರು.
ಮೃತರು ಪತ್ನಿ ಸೌಮ್ಯ ಇಬ್ಬರು ಪುತ್ರಿಯರಾದ ಸಾಂದ್ರ, ಸಯಾನ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.