ಕ್ರೈಂ ವಾರ್ತೆ

ನದಿಗೆ ಸ್ನಾನಕ್ಕೆ ಹೋಗಿದ್ದ ಧರ್ಮಸ್ಥಳ ಜೋಡುಸ್ಥಾನದ ಯುವಕ ಮೃತ್ಯು

ಧರ್ಮಸ್ಥಳ: ಇಲ್ಲಿಯ ಕೂಡಿಗೆ ಪರಪ್ಪು ಎಂಬಲ್ಲಿ ನೇತ್ರಾವತಿ ನದಿಗೆ ಸ್ನಾನಕ್ಕೆ ಹೋಗಿದ್ದ ನಾಲ್ಕು ಮಂದಿಯಲ್ಲಿ ಓರ್ವ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೇ ೨೭ರಂದು ವರದಿಯಾಗಿದೆ.
ಧರ್ಮಸ್ಥಳ ನಿವಾಸಿಗಳಾದ ನವೀನ್, ಶ್ರೀಧರ, ವಸಂತ, ಯತೀಶ ಸೇರಿ ನಾಲ್ಕು ಮಂದಿ ಮಧ್ಯಾಹ್ನ ನದಿಗೆ ಸ್ನಾನಕ್ಕೆ ಹೋಗಿದ್ದರು. ಸ್ನಾನಕ್ಕೆ ಹೋಗಿದ್ದ ನಾಲ್ವರಲ್ಲಿ ಶ್ರೀಧರ ಎಂಬವರು ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟರೆನ್ನಲಾಗಿದೆ.
ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು, ಸ್ಥಳೀಯ ಆಗಮಿಸಿ ಶೋಧ ಕಾರ್ಯ ನಡೆಸಿ ಶವವನ್ನು ಬೆಳ್ತಂಗಡಿ ಆಸ್ಪತ್ರೆಗೆ ತರಲಾಗಿದೆ. ಧಮ೯ಸ್ಥಳ ಪೊಲೀಸರು ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ