ತಾಲೂಕು ಸುದ್ದಿ

ಕನ್ಯಾಡಿ ದಿನೇಶ್ ಸಾವು ಪ್ರಕರಣ: ನ್ಯಾಯಾಂಗ ಬಂಧನದಲ್ಲಿದ್ದ ಕೃಷ್ಣನಿಗೆ ಜಾಮೀನು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯ ದಿನೇಶ್ ಎಂಬವರ ಸಾವಿನ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಧರ್ಮಸ್ಥಳದ ಕೃಷ್ಣ ಯಾನೆ ಕಿಟ್ಟ ಎಂಬಾತನಿಗೆ ಜಿಲ್ಲಾ ನ್ಯಾಯಾಲಯ
ಫೆ.23ರಂದು ಜಾಮೀನು ನೀಡಿದೆ.

ದಿನೇಶ್ ಜಾಗದ ನೋಂದಾವಣೆ
ವಿಚಾರವನ್ನು ಸಾವ೯ಜನಿಕವಾಗಿ ಹೇಳಿದರು ಎಂಬ ಕೋಪದಲ್ಲಿ ಡಿ .ಕೃಷ್ಣ
ಫೆ.23 ರಂದು ಹಲ್ಲೆ ನಡೆಸಿದರೆಂದು ಆರೋಪಿಸಲಾಗಿತ್ತು. ಹಲ್ಲೆ ನಡೆಸಿದ
ದೃಶ್ಯ ಸಾಮಾಜಿಕ ಜಾಲತಾಣದಲ್ಲಿ
ವೈರಲ್ ಆಗಿತ್ತು. ನಂತರ ಅನಾರೋಗ್ಯಕ್ಕೆ ಒಳಗಾಗಿದ್ದ ದಿನೇಶ್  ಚಿಕಿತ್ಸೆ ಫಲಕಾರಿಯಾಗದೆ
ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮರುದಿನ ದಿನೇಶ್ ತಾಯಿ ಪದ್ಮಾವತಿ ಮಗನದ್ದು ಕೊಲೆಯೆಂದು  ಆರೋಪಿಸಿ ಧರ್ಮಸ್ಥಳ ಠಾಣೆಯಲ್ಲಿ ಹಲ್ಲೆ ನಡೆಸಿದ ಡಿ.ಕೃಷ್ಣ ವಿರುದ್ಧ ದೂರು ದಾಖಲಿಸಿದ್ದರು.
ಧರ್ಮಸ್ಥಳ ಠಾಣೆಯ ಪೊಲೀಸರು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯ ಕ್ಕೆ ಹಾಜರು ಪಡಿಸಿದಾಗ ನ್ಯಾಯಲಯ ನ್ಯಾಯಾಂಗ ಬಂಧನ ವಿಧಿಸಿತ್ತು.

ನಿಮ್ಮದೊಂದು ಉತ್ತರ