ಗ್ರಾಮಾಂತರ ಸುದ್ದಿ

*ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ವಾರ್ಷಿಕ ಮಹಾಸಭೆ*

ತಾಲೂಕಿನ ಅತ್ಯಂತ ಕ್ರಿಯಶೀಲ ಮತ್ತು ಶಿಸ್ತುಬದ್ಧ ಸಂಘ: ಹರೀಶ್ ಕಾರಿಂಜ*

ಕಣಿಯೂರು: ಜು. 17ರಂದು ಭಾನುವಾರ ರುಕ್ಮಯ ಹಲೇಜಿ ಇವರ ಮನೆಯಲ್ಲಿ ನಡೆದ ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ ತಾಲೂಕು ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ ಮಾತನಾಡಿ ಕಳೆದ ಎರಡು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸೇವೆಗಳಿಂದ ತಾಲೂಕಿನ ಎಲ್ಲಾ ಸಂಘಗಳಿಗೂ ಮಾದರಿ ಸಂಘವಾಗಿ ಬೆಳೆಯುತ್ತಿದೆ, ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಿದಾಗ ಸಮುದಾಯವು ಅಭಿವೃದ್ಧಿಯಾಗುವುದು ಸಾಧಕ ವಿದ್ಯಾರ್ಥಿಗಳನ್ನು ಪ್ರೊತ್ಸಾಹಿಸುವುದು ಒಳ್ಳೆಯ ಕಾರ್ಯವಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. 2021-22 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ಯಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. 2021-22 ನೇ ಸಾಲಿನ ಲೆಕ್ಕಪತ್ರ ಮತ್ತು ವರದಿಯನ್ನು ಕುಮಾರಿ ವೇದಿತ ವಾಚಿಸಿದರು. ಸಭೆಯ ಅಧ್ಯಕ್ಷತೆಯನ್ನು ಉಮೇಶ್ ಪಿಲಿಗೂಡು ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಯಶೋಧರ ಅಂತರ ಮತ್ತು ಯಶೋಧರ ಮಜಿಕುಡೆಲು, ಯುವವೇದಿಕೆಯ ಅಧ್ಯಕ್ಷರಾದ ಅಶೋಕ್ ಬರಂಬು ಉಪಸ್ಥಿತರಿದ್ದರು ಕುಮಾರಿ ಶಾರ್ವರಿ ಪ್ರಾರ್ಥಿಸಿ ಅಶೋಕ್ ಬರಂಬು ಸ್ವಾಗತಿಸಿದರು.ಸೃಜನ್ ಪಿಲಿಗೂಡು ಕಾರ್ಯಕ್ರಮ ನಿರೂಪಿಸಿ ಕುಮಾರಿ ನಿರೀಕ್ಷಾ ಎ. ಧನ್ಯವಾದಗೈದರು

ನಿಮ್ಮದೊಂದು ಉತ್ತರ