ಗ್ರಾಮಾಂತರ ಸುದ್ದಿ

ಗುರುವಾಯನಕೆರೆ ಮಂಚಕಲ್ಲು ದೈವಗಳ ಪುನರ್‌ಪ್ರತಿಷ್ಠೆ ಕಲಶಾಭಿಷೇಕ


ಗುರುವಾಯನಕೆರೆ: ಶ್ರೀ ಕ್ಷೇತ್ರ ಮಂಚಕಲ್ಲು ದೈವ ಸನ್ನಿಧಿ ಶಾರದಾನಗರ, ಗುರುವಾಯನಕೆರೆಯಲ್ಲಿ ಕೊಡಮಣಿತ್ತಾಯ, ಪಿಲಿಚಾಮುಂಡಿ, ಕಲ್ಲುರ್ಟಿ-ಪಂಜುರ್ಲಿ, ಗುಳಿಗ ದೈವಗಳ `ಪುನರ್‌ಪ್ರತಿಷ್ಠೆ, ಕಲಶಾಭಿಷೇಕ, ಪರ್ವ ಸೇವೆ ಮೇ 24 ಸೋಮವಾರ ಬೆಳಿಗ್ಗೆ 9.50ರ ಮಿಥುನ ಲಗ್ನ ಸುಮುಹೂರ್ತದಲ್ಲಿ

ಕುತ್ಯಾರು ದಯಾಕರ ಭಟ್‌ರವರ ಪೌರೋಹಿತ್ಯದಲ್ಲಿ ಊರ ಹಾಗೂ ಪರವೂರುಗಳಿಂದ ಆಗಮಿಸಿದ ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರುಗಿತು.

ಮೇ 22 ಆದಿತ್ಯವಾರ ರಾತ್ರಿ 7 ರಿಂದ ವಾಸ್ತುಹೋಮ, ವಾಸ್ತುಬಲಿ ಕಾರ್ಯಕ್ರಮ ನಡೆಯಿತು. ಮೇ.23 ಸೋಮವಾರ ಬೆಳಿಗ್ಗೆ 9.50ಕ್ಕೆ ಗಣಹೋಮ, ಪ್ರತಿಷ್ಠಾ ಹೋಮ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪರ್ವಸೇವೆಮಧ್ಯಾಹ್ನ ಮಹಾಪೂಜೆ ಜರುಗಿತು. ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ, ಬರೋಡ, ನವಶಕ್ತಿ, ಅಧ್ಯಕ್ಷರಾದ ಧನಂಜಯ್ ರಾವ್, ರಂಗಬೆಟ್ಟು, ಉಪಾಧ್ಯಕ್ಷರಾದ ಪುರಂದರ ಶೆಟ್ಟಿ, ಪಾಡ್ಯಾರು, ಕೃಷ್ಣಾನಂದ ಕುಲಾಲ್, ಮಾಕೆರೆಕೆರೆ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕುಂಬ್ಳೆ, ಜತೆ ಕಾರ್ಯದರ್ಶಿ ವಿಠಲ್ ಶೆಟ್ಟಿ, ಪಾಡ್ಯಾರು, ಕೋಶಾಧಿಕಾರಿ ರಮಾನಂದ ಸಾಲ್ಯಾನ್ ಶ್ರೀ ಗುರು, ಸಂಚಾಲಕರಾದ ಆನಂದ ಕೋಟ್ಯಾನ್,

ಗೌರವ ಸಲಹೆಗಾರಾದ ಪ್ರವೀಣ್ ಕುಮಾರ್ ಅಜ್ರಿ ಪಾಡ್ಯಾರುಬೀಡು, ಸುಕೇಶ್ ಕುಮಾರ್ ಜೈನ್ ಕಡಂಬು, ರಾಜೇಶ್ ಶೆಟ್ಟಿ, ನವಶಕ್ತಿ, ರಾಜೇಂದ್ರ ನಾಯರ್ ಯರ್ಡೂರು, ಜಿ. ಗೋಪಿನಾಥ್ ನಾಯಕ್ ಜಿ.ಕೆರೆ, ಹೇಮಂತ್ ರಾವ್ ಯರ್ಡೂರು, ದಯಾನಂದ ರಾವ್ ಕುಂಟಲೆ, ಹರಿದಾಸ್ ಕೆ. ಮೆಸ್ಕಾಂ, ಹರೀಶ್ ಶೆಟ್ಟಿ ಮೆಸ್ಕಾಂ, ಲೋಕೇಶ್ ಕುಲಾಲ್ ಕಂಚಿಂಜ ಹಾಗೂ ಸರ್ವಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ