ಬೆಳ್ತಂಗಡಿ: ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ಸಂಯೋಜಿತ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ಸ ಮಜ್ದೂರು ಸಂಘ ದ ಜಿಲ್ಲಾ ಸಮಿತಿಯ ಅಧಿಕೃತ ಘೋಷಣಾ ಸಭೆ ಮತ್ತು ಭಾರತೀಯ ಮಜ್ದೂರು ಸಂಘ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಜಯರಾಜ್ ಸಾಲ್ಯಾನ್ ಇವರಿಗೆ ಗೌರವಾರ್ಪನಾ ಸಮಾರಂಭ ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ಜು.31ರಂದು ನಡೆಯಿತು.
ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಕಾನರ್ಪ ಇವರಿಗೆ ರಬ್ಬರ್ ಟ್ಯಾಪರ್ಸ ಮಜ್ದೂರು ಸಂಘದ ಪ್ರದಾನ ಕಾರ್ಯದರ್ಶಿ ನಾಗರಾಜ್ ಬದನಾಜೆ ಹೂ ಗುಚ್ಚ ನೀಡಿ, ಅಧ್ಯಕ್ಷರಾದ ದಯಾನಂದ ಇವರುಗಳು ರಬ್ಬರ್ ಟ್ಯಾಪರ್ಸ ಕಾರ್ಮಿಕರ ಪರವಾಗಿ ಶಾಲು ಹೊದಿಸಿ ಗೌರವಸಿದರು.
ನಂತರ ಮಾತನಾಡಿದ ಜಯರಾಜ್ ಸಾಲ್ಯಾನ್ ಕಾನರ್ಪ ಇವರು ಸಂಘ ಎಂಬುದು ಒಂದು ಭಕ್ತಿ ಪೂರ್ವಕ ವಾದದ್ದು ಮತ್ತು ಸಮಾಜ ಸೇವೆಯಲ್ಲಿ ಶಿಸ್ತಿನಿಂದ ತೊಡಗಿಸಿಕೊಂಡಾಗ ಅದು ದೇವರ ಕೆಲಸವಾಗುತ್ತದೆ ಎಂದರು.ನಂತರ ನಡೆದ ರಬ್ಬರ್ ಟ್ಯಾಪರ್ಸ ಮಜ್ದೂರು ಸಂಘದ ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ದಯಾನಂದ, ಪ್ರಧಾನ ಕಾರ್ಯದರ್ಶಿ ಯಾಗಿ ನಾಗರಾಜ್ ಬದಣಾಜೆ, ಉಪ ಪ್ರಧಾನಕಾರ್ಯ
ದರ್ಶಿಯಾಗಿ ಸುರೇಶ್ ಕುತ್ತಿನ, ಸಂಘಟನಾ ಕಾರ್ಯದರ್ಶಿ ಯಾಗಿ ಭುವನೇಶ್ವರ ಕಾರಿಂ
ಜ,ಕೋಶಾಧಿಕಾರಿ ರಾಜ ಮಾಚಾರುಹಾಗುಉಪಾ
ಧ್ಯಕ್ಷರುಗಳಾಗಿ ಸಂದಿಲ್ ಕುಮಾರ್ಒಟಕಜೆ,ಮನೋಜ್ ಮೂ ರ್ಜೆ,ಅಚ್ಚುತ ಪ್ರಭು ಕುಂಬ್ರ,ಯೋಗಿಶ್ ಪೂಂಜಾಲಕಟ್ಟೆ,ಹರಿಶಂಖರ್ ಕುಂದಾಪುರ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ನಾಗೇಂದ್ರ, ರಘುಪತಿ, ಅಶೋಕ್ ಮೂರ್ಜೆ ಹಾಗೂ ನಿರ್ದೇಶಕರಾಗಿ ಅರುಣ್ ವರ್ಧನ್,
ಅಜಿತ್ ಕಿನ್ಯಾಜೆ,
ಶಶಿಕುಮಾರ್ ತೊಡಿಕಾನ ಆಯ್ಕೆ ಮಾಡಲಾಯಿತು.ಭುವನೇಶ್ವರ ಕಾರಿಂಜ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ,ವಂದಿಸಿದರು.