ನಿಧನ ಸುದ್ದಿ

ಉಪ್ಪಿನಂಗಡಿಯಲ್ಲಿ ಲಾರಿ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ತೆಕ್ಕಾರು ಸರಳೀಕಟ್ಟೆ ನಿವಾಸಿ ಮಹಿಳೆ ಮೃತ್ಯು

ಬೆಳ್ತಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಅದಿತ್ಯ ಹೋಟೆಲ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೆಕ್ಕಾರು ಸರಳಿಕಟ್ಟೆ ನಿವಾಸಿ ಸೆಕೀನಾ ಎಂಬುವರು ಮೃತಪಟ್ಟ ಘಟನೆ ಫೆ.೫ರಂದು ಮಧ್ಯಾಹ್ನ ಸಂಭವಿಸಿದೆ.
ಮೃತ ಸೆಕೀನಾ ಅವರು ಸರಳಿಕಟ್ಟೆ ನಿವಾಸಿ ರಫೀಕ್ ಎಂಬವರ ಪತ್ನಿಯಾಗಿದ್ದು, ತೆಕ್ಕಾರು ಗ್ರಾ.ಪಂ ಸದಸ್ಯ ತನಲ್ ಈವೆಂಟ್ ಮೆನೇಜ್‌ಮೆಂಟ್ ಸಂಸ್ಥೆಯ ಮಾಲಕ ಹಕೀಮ್ ಅವರ ಸಹೋದರಿಯಾಗಿದ್ದಾರೆ.
ಬಿ.ಸಿರೋಡಿನಿಂದ ನೆಲ್ಯಾಡಿ ಕಡೆಗೆ ಹೋಗುತ್ತಿದ್ದ ಸಿಮೆಂಟ್ ಮಿಕ್ಸರ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಈ ಅಪಘಾತದಲ್ಲಿ ಸೆಕೀನಾ ಅವರು ಸ್ಥಳದಲ್ಲೇvಮೃತಪಟ್ಟರೆ, ಬೈಕ್ ಸವಾರ ಅವರ ಪತಿ ರಫೀಕ್ ಸಣ್ಣ-ಪಟ್ಟ ಗಾಯಕ್ಕೊಳಗಾಗಿ ಅಪಾಯದಿಂದ ಪಾರಾಗಿದ್ದಾರೆ. ಪುತ್ತೂರು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ