ಕ್ರೈಂ ವಾರ್ತೆ

ಹಾಡು ಹಗಲೇ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಎಗರಿಸಿದ ಕಳ್ಳ

ಓಡಿಲ್ನಾಳ  :ಹಾಡು ಹಗಲೇ ಮನೆಯೊಳಗೆ ನುಗ್ಗಿದ ಕಳ್ಳಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಕರಿಮಣಿಯನ್ನು ಎಳೆದು
ಪರಾರಿಯಾದ ಘಟನೆ ಓಡಿಲ್ನಾ ಳ ಗ್ರಾಮದಲ್ಲಿ ಇಂದು(ಅ.19)ಸಂಜೆ ನಡೆದಿದೆ.

ಓಡಿಲ್ನಾಳ ಗ್ರಾಮದ ಶಾಲೆ ಬಳಿ ವಾಸವಿರುವ ಉಮಾನಾಥ ಮೂಲ್ಯ ರವರ ಮನೆ ಬಳಿ ಬೈಕಿನಲ್ಲಿ ಬಂದ ಕಳ್ಳಮನೆಯೊಳಗಿದ್ದ ಅವರ ಪತ್ನಿ ಕಮಲ ರವರ ಕುತ್ತಿಗೆಯಲ್ಲಿದ್ದ
ಕರಿಮಣಿಯನ್ನು ಎಗರಿಸಿ ಪರಾರಿಯಾಗಿದ್ದಾನೆ.

ಮಹಿಳೆಯ ಬೊಬ್ಬೆಯನ್ನು ಕೇಳಿದ ಸ್ಥಳೀಯ
ನಿವಾಸಿಯೋರ್ವರು ಕೂಡಲೇ ಸ್ಥಳಕ್ಕೆ ಹೋಗಿದ್ದ ಸಂಧರ್ಭದಲ್ಲಿಈ ವಿಚಾರ ಬೆಳಕಿಗೆ ಬಂದಿತ್ತು ಕೂಡಲೇ ಅವರು ಪೊಲೀಸ್  ಠಾಣೆಗೆ ವಿಚಾರ ತಿಳಿಸಿದ್ದರು.

ಆ ಕ್ಷಣವೇ ಸೇರಿದ ಸ್ಥಳೀಯರು ಕಳ್ಳನ ಚಹರೆ ಬಗ್ಗೆಮಹಿಳೆಯಲ್ಲಿ ವಿಚಾರಿಸಿದ್ದು, ಮದ್ದಡ್ಕ ದಲ್ಲಿರುವ ಸೆಲೂನಿನಲ್ಲಿಆ ಕಳ್ಳನಿರುವ ಮಾಹಿತಿ
ಸಂಗ್ರಹಿಸಿದ್ದಾರೆ.
ಕೂಡಲೇ ಆತನನ್ನು ಸ್ಥಳೀಯರು ಬೆಳ್ತಂಗಡಿ ಪೊಲೀಸ್ ಠಾಣೆಗೆಒಪ್ಪಿಸಿದ್ದಾರೆ. ಕಳವು ಮಾಡುವ ಸಂಧರ್ಭದಲ್ಲಿ ಕಳ್ಳನ
ಮೊಬೈಲ್ ಹೆಡ್ ಫೋನ್ ಸಿಕ್ಕಿದ ಆಧಾರದಲ್ಲಿ ತಾನೇ ಕಳವು ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಅದೇ ಊರಿನಲ್ಲಿರುವ ಸಂಭಂಧಿಯೋರ್ವರ ಮನೆಗೆ ಬಂದಿದ್ದಈ ಕಳ್ಳ ಈ ಮನೆಯವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಈ ಕೃತ್ಯ ವೆಸಗಿದ್ದಾನೆ ಎಂಬುವುದಾಗಿ
ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ.

ನಿಮ್ಮದೊಂದು ಉತ್ತರ