ಗುರುವಾಯನಕೆರೆ: ಇಲ್ಲಿಯ ಗುರುವಾಯನಕೆರೆ
ಕರ್ನಾಟಕ ಬ್ಯಾಂಕಿನ ಎಟಿಎಂ ನ ಹಣವನ್ನು ಕಳವು ಮಾಡಲು ಕಳ್ಳರು ಯತ್ನಿಸಿದ ಘಟನೆ ಸೆ.8 ರಂದು ರಾತ್ರಿ ನಡೆದಿದೆ.
ಈ ಎಟಿಎಂನ ನಿವ೯ಹಣೆಯನ್ನು ಎಫ್ ಐಎಸ್ ಎಂಬ ಕಂಪೆನಿ ಹೊರಗುತ್ತಿಗೆ ಗೆ ಪಡೆದಿದ್ದು,
ಸೆ. 9 ರಂದು ಮದ್ಯರಾತ್ರಿ 2-10 ಗಂಟೆಯಿಂದ 3.00 ಗಂಟೆಯ ಮಧ್ಯದ ಅವಧಿಯಲ್ಲಿ ಕರ್ನಾಟಕ ಬ್ಯಾಂಕಿನ ಗುರುವಾಯನಕೆರೆ ಎಟಿಎಂ ಮೆಷಿನ್ ಇರುವ ಕಟ್ಡದ ಒಳಗೆ ಯಾರೋ ಕಳ್ಳರು ಪ್ರವೇಶಿಸಿ ಕಟ್ಟಡದ ಒಳಗೆ ಇರುವ ಸಿಸಿ ಕ್ಯಾಮರಕ್ಕೆ ಕಪ್ಪು ಸ್ಪ್ರೇ ಹಾಕಿ ಮೆಷಿನಿನ ಬಲಬದಿಗೆ ಗ್ಯಾಸ್ ಕಟ್ಟರ್ ನ ಸಹಾಯದಿಂದ ಹಾನಿಗೊಳಿಸಿ ಅದರೊಳಗಿದ್ದ ಹಣವನ್ನು ಕಳವು ಮಾಡಲು ಯತ್ನಿಸಿದ್ದಾರೆ
ಎಂದು ಕಂಪೆನಿಯ ಯುವರಾಜ್ ಬೆಳ್ತಂಗಡಿ ಪೊಲೀಸ್ರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಶ್ವಾನ ದಳ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ.