ಬೆಳ್ತಂಗಡಿ; ಬದುಕುಕಟ್ಟೋಣ ತಂಡ, ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ ಉಜಿರೆ ಮತ್ತು ಗ್ರಾ.ಪಂ ಉಜಿರೆ ವತಿಯಿಂದ, ಕೊರೋನಾ ತುರ್ತು ಸೇವಾ ಚಟುವಟಿಕೆ “ಆಪ್ತರಕ್ಷಕ” ಕಾರ್ಯಕ್ರಮಕ್ಕೆ ಮೇ 13 ರಂದು ಉಜಿರೆಯಲ್ಲಿ ಚಾಲನೆ ನೀಡಲಾಯಿತು.
ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಓಡಿಯಪ್ಪ ಗೌಡ ಉದ್ಘಾಟನೆ ನೆರವೇರಿಸಿದರು. ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಆರ್ ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು ಮತ್ತು ಸದಸ್ಯರುಗಳು, ಉಜಿರೆ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅರ್ಚನಾ, ರೋಟರಿ ಕ್ಲಬ್ ಅಧ್ಯಕ್ಷ
ಬಿ.ಕೆ ಧನಂಜಯ ರಾವ್, ಬದುಕು ಕಟ್ಟೋಣ
ತಂಡದ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಮತ್ತು ರಾಜೇಶ್ ಪೈ ಸಂಧ್ಯಾ ಟ್ರೇಡರ್ಸ್ ಮೊದಲಾದವರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಶರತ್
ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ತಿಮ್ಮಯ್ಯ ನಾಯ್ಕ ನಿರೂಪಿಸಿದರು.
* ಉಚಿತ 5 ಆಪ್ತ ರಕ್ಷಕ ವಾಹನ ವ್ಯವಸ್ಥೆ ಮಾಡಿದ್ದು, ಅನಾರೋಗ್ಯದ ಸಮಸ್ಯೆ ಬಂದಲ್ಲಿ ತಕ್ಷಣ ಸಹಾಯವಾಣಿ ಸಂಖ್ಯೆ 7760018100 ಕ್ಕೆ ಸಂಪರ್ಕಿಸಿ , ನಿಮ್ಮ ಮನೆ ಬಾಗಿಲಿಗೆ ” ಆಪ್ತರಕ್ಷಕ*” *ವಾಹನ ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗುವುದು.*