ಬೆಳ್ತಂಗಡಿ: ಇತ್ತೀಚೆಗೆ ನಡೆದ ಮೂಡಿಗೆರೆ ಪೋಲಿಸ್ ಠಾಣೆಯಲ್ಲಿ ಪ.ಜಾತಿ ಬೈರ ಸಮುದಾಯದ ಪುನಿತ್ ಕೆ.ಎಸ್ ಗೋಣಿಬೀಡು ಮೂಡಿಗೆರೆ ಎಂಬ ಯುವಕನಿಗೆ ಬಲವಂತವಾಗಿ
ಮೂತ್ರ ಕುಡಿಸಿದ ಆರೋಪದ ಪ್ರಕರಣದ ಉನ್ನತ ಮಟ್ಟದ ತನಿಖೆಯನ್ನು ನಡೆಸುವಂತೆ ಬೆಳ್ತಂಗಡಿ ಡಿಎಸ್ಎಸ್ ( ಅಂಂಬೇಡ್ಕರ್ ವಾದ ) ತಾಲೂಕು ಸಂಚಾಲಕ ನಾಗರಾಜ್ ಎಸ್. ಲಾಯಿಲ ಆಗ್ರಹಿಸಿದ್ದಾರೆ.
ಅರಕ್ಷಕರ ಠಾಣೆಯಲ್ಲಿ ಹೀನಾಯ ಕೃತ್ಯ ಎಸಗಿದ್ದರೆನ್ನಲಾದ ಆರೋಪ ಗೋಣಿಬೀಡು ಪೋಲಿಸ್ ಠಾಣೆ ಪಿ.ಎಸ್ಸೈ ಅರ್ಜುನ್ರವರ ಮೇಲಿದ್ದು, ಇದು ಮಾನವ ಕುಲಕ್ಕೆ ಅವಮಾನ ಎಸಗಿದಂತಾಗಿದೆ. ಇತ್ತೀಚಿನ ವರ್ಷಗಳಿಂದ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರಕಾರ ದಲಿತ ಸಮುದಾಯಕ್ಕೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಲಿತ ದೌರ್ಜನ್ಯಕ್ಕೆ ಒಳಗಾದ ಯುವಕನಿಗೆ ಕೂಡಲೇ ಕರ್ನಾಟಕ ರಾಜ್ಯ ಸರ್ಕಾರ ರೂ.೮ ಲಕ್ಷ ಸಹಾಯ ಧನವನ್ನು ದಲಿತ ದೌರ್ಜನ್ಯ ಕಾಯಿದೆಯಡಿಯಲ್ಲಿ ನೀಡಬೇಕು. ಯುವಕನಿಗೆ ಆತನ ಮನೆಯವರಿಗೆ ಸರಕಾರ ಸೂಕ್ತ ಭದ್ರತೆ ಒದಗಿಸ ಬೇಕು.ಉನ್ನತ ತನಿಖೆಯ ಮೂಲಕ ಆರೋಪಿತರಾದ ಪಿ.ಎಸ್ಸೈಯನ್ನು ವಜಾಗೊಳಿಸಿ ಉನ್ನತ ಮಟ್ಟದ ತನಿಖೆಯನ್ನು ನಡೆಸಿ ಇನ್ನೂಳಿದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅಗ್ರಹಿಸಿದ್ದಾರೆ.
ನಾಗರಾಜ್ ಎಸ್. ಲಾಯಿಲ
‐————————————————