ಉದ್ಯಮಿ ರಮೇಶ್ ಪೈ
ಬೆಳ್ತಂಗಡಿ: ಬೆಳ್ತಂಗಡಿಯ ಹಿರಿಯ ಉದ್ಯಮಿಗಳು, ಶ್ರೀ ವೆಂಕಟರಮಣ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರು ಆಗಿದ್ದ ಲಾಲ ಶಾಂಭವಿ ನಿಲಯದ ನಿವಾಸಿ ರಮೇಶ್ ಪೈ (೭೩ವ) ಅವರು ಡಿ.೨ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಮೃತರು ಪುತ್ರರಾದ ಲಾಲ ಪೈ ಕ್ಯಾರ್ಸ್ನ ಮಾಲಕ ಶಶಿಧರ ಪೈ, ನಾಗೇಶ್ ಪೈ, ಪುತ್ರಿಯರಾದ ಸವಿತಾ ಪೈ, ಪೂರ್ಣಿಮಾ ಪೈ, ಪ್ರಪುಲ್ಲ ಪೈ ಹಾಗೂ ಬಂಧು ವರ್ಗದರು, ಕುಟುಂಬಸ್ಥರನ್ನು ಅಗಲಿದ್ದಾರೆ.