ಬೆಳ್ತಂಗಡಿ: ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಜಿಂಕೆ ಚರ್ಮವನ್ನು ಬೆಳಗಾವಿಯಿಂದ ಬಸ್ ಮೂಲಕ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಗುಮಾನಿ ಮೇರೆಗೆ ಪುತ್ತೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್ಐ ಶ್ರೀಮತಿ ಜಾನಕಿ ನೇತ್ರತ್ವದಲ್ಲಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿ
ದ್ದಾರೆ.
ಬೆಳಗಾವಿಯ ಹನುಮಂತ(35) ಬಂಧಿತ ಆರೋಪಿ.ಆತನಿಂದ ಒಂದು ಮೊಬೈಲ್ ಫೋನ್,
ಹಾಗೂ ಜಿಂಕೆ ಚರ್ಮವನ್ನುವಶಪಡಿಸಿಕೊ
ಳ್ಳಲಾಗಿದೆ ಆರೋಪಿಯನ್ನು ಬೆಳ್ತಂಗಡಿ
ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.