ಗುರುವಾಯನಕೆರೆ: ಇಲ್ಲಿಯ ಉಪ್ಪಿನಂಗಡಿ ರಸ್ತೆ ಬಳಿಯ ಫ್ಯಾಬ್ರಿಕೇಶನ್ ಸಾಮಾಗ್ರಿಗಳ ಮಾರಾಟ ಅಂಗಡಿ ವಿನಾಯಕ ಏಜನ್ಸಿ ಯಿಂದ ಹಗಲು ಹೊತ್ತಿನಲ್ಲಿ ಕಳವು ನಡೆಸುತ್ತಿದ್ದ ಮೂರು ಮಂದಿ ರೆಡ್ ಹ್ಯಾಂಡ್ ಆಗಿ ಸಾವ೯ಜನಿಕರ ಕೈಗೆ ಸಿಕ್ಕಿ
ಬಿದ್ದ ಘಟನೆ ಎ.25ರಂದು ವರದಿಯಾಗಿದೆ.
ಸಂತೋಷ್ ಎಂಬವರ ಮಾಲಕತ್ವದ ಈ ಅಂಗಡಿಯಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೋವ೯ ಸೇರಿದಂತೆ ಮೂರು ಮಂದಿಯನ್ನು ಹಿಡಿದು ಪೊಲೀಸ್ ರ ವಶ ನೀಡಲಾಗಿದೆ.
ಸಿ.ಎ ಬ್ಯಾಂಕ್ ಇರುವ ಈ ಕಟ್ಟಡಕ್ಕೆ ರಾತ್ರಿ ಕಾವಲುಗಾರನಿದ್ದು, ಬೆಳಗ್ಗೆ 6 ಗಂಟೆಗೆ ಆತ ಡ್ಯೂಟಿ ಮುಗಿಸಿ ಹೋದ ಬಳಿಕ ಆರೋಪಿಗಳು ಈ ಕೃತ್ಯ ಎಸಗುತ್ತಿದ್ದ ರೆನ್ನಲಾಗಿದ್ದು , ಕಳೆದ ಮೂರು ತಿಂಗಳಿಂದ ಈ ರೀತಿ ಹಗಲು ಹೊತ್ತಿನಲ್ಲಿ ಕಳ್ಳತನ ಮಾಡುತ್ತಿದ್ದರೆಂದು ಹೇಳಲಾಗುತ್ತದೆ.