ಕ್ರೈಂ ವಾರ್ತೆ

ಅಗರಿಯ ಅಟೋ ಚಾಲಕ ಅಸಹಜ ಸಾವು: ಚರಂಡಿಯಲ್ಲಿ ಶವ ಪತ್ತೆ

 

 

 

ತೋಟತ್ತಾಡಿ: ಇಲ್ಲಿಯ ಅಗರಿ ರಿಕ್ಷಾ ಚಾಲಕ ಹಾಗೂ ಮಾಲಕ ಗಂಗಯ್ಯ ಗೌಡ (65.ವ) ರವರು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಎ.3ರಂದು ಬೆಳಕಿಗೆ ಬಂದಿದೆ.
ತೋಟತ್ತಾಡಿಯ ಕಂಚರಿಕಂಡ ಎಂಬಲ್ಲಿಯ ಚರಂಡಿಯೊಂದರಲ್ಲಿ ಇವರ ಮೃತದೇಹ ನಗ್ನ ಸ್ಥಿತಿಯಲ್ಲಿ ಕಂಡುಬಂದಿದ್ದು, ಇದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.
ನೆಲದ ಮೇಲೆ ಲುಂಗಿಯನ್ನು ಹಾಸಿ ಅದರ ಮೇಲೆ ಮಲಗಿರುವ ಸ್ಥಿತಿಯಲ್ಲಿ ಇವರ ಮೃತದೇಹದ ಕಂಡುಬಂದಿದ್ದು, ಶವದ ಸುತ್ತಲೂ ಕೆಂಪು ಇರುವೆ ಮುತ್ತಿಕೊಂಡಿದೆ ಹಾಗೂ ಶವದ ಪಕ್ಕದಲ್ಲಿಯೇ ಅವರ ಮೊಬೈಲ್ ಫೋನ್ ಕಂಡುಬಂದಿದ್ದು, ಇವರ ಅಟೋರಿಕ್ಷಾ ಸುಮಾರು ಸ್ವಲ್ಪ ದೂರದಲ್ಲಿದೆ.
ಆರ್ಥಿಕವಾಗಿ ಸ್ಥಿತಿವಂತಾಗಿರುವ ಗಂಗಯ್ಯ ಗೌಡ ರವರನ್ನು ಯಾರೋ ಹಣದ ಆಸೆಗೆ ಕೊಲೆ ಮಾಡಿರಬಹುದೇ ಅಥವಾ ಇನ್ನೇನಾದರೂ ನಡೆದಿದೆಯೇ
ಎಂಬ ಸಂಶಯ ವ್ಯಕ್ತವಾಗುತ್ತಿದೆ. ಸ್ಥಳೀಯರು ಈಗಾಗಲೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮದೊಂದು ಉತ್ತರ