ಕ್ರೈಂ ವಾರ್ತೆ

ಮುಂಡಾಜೆ ಸೀಟ್ ಬಳಿ ಪಿಕಾಫ್ ಬೈಕ್ ಅಪಘಾತ: ಬೆಂದ್ರಾಳ ನಿವಾಸಿ ಯುವಕ ಮೃತ್ಯು

ಮುಂಡಾಜೆ: ರಾಷ್ಟ್ರೀಯ ಹೆದ್ದಾರಿ ಮುಂಡಾಜೆ ಸೀಟು ಬಳಿ   ಪಿಕಾಫ್ ಮತ್ತು     ಬೈಕ್  ನಡುವೆ     ಸಂಭವಿಸಿದ  ಘಟನೆ  ಎ.16 ರಂದು  ವರದಿಯಾಗಿದೆ.

ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ತೋಟತ್ತಾಡಿ ಗ್ರಾಮದ ಕುತ್ರಿಜಾಲ್  ನಿವಾಸಿ ಶೇಖರ ಭಂಡಾರಿಯವರ ಪುತ್ರ ಸುದೀಪ್ ಭಂಡಾರಿ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ .

ಸಹಸವಾರ ಉಜಿರೆ ಗ್ರಾಮದ ಮುಂಡತ್ತೋಡಿ ನಿವಾಸಿ ಸುಂದರ ಪೂಜಾರಿಯವರ ಪುತ್ರ ಪ್ರಶಾಂತ್ ಪೂಜಾರಿ ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ

ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಇದೀಗ ಕೊನೆಯುಸಿರೆಳೆದಿದ್ದಾರೆ. ಎಂದು ತಿಳಿದುಬಂದಿದೆ.ಬೆಳ್ತಂಗಡಿ ಸಂಂಚಾಾರಿ ಪೊಲೀಸ್  ತನಿಖೆ ನಡೆಸುತ್ತಿದ್ದಾರೆ

ನಿಮ್ಮದೊಂದು ಉತ್ತರ