ಮಾಲಾಡಿ: ಇಲ್ಲಿಯ ಅರ್ತಿಲ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಮಾ.22 ರಂದು ನಡೆದಿದೆ.
ಬಂಟ್ವಾಳ ತಾಲೂಕು ಮದ್ದ
ನಿವಾಸಿ ಮಾಝೀನ್(26.ವ) ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಮದ್ದಡ್ಕದಲ್ಲಿ ಶುಭಾರಂಭಗೊಳ್ಳಲಿರುವ ಇಂಜಿನಿಯರಿಂಗ್ ವರ್ಕ್ಸ್ ಅಂಗಡಿಯೊಂದರ ಕಾರ್ಯಕ್ರಮಕ್ಕೆ ಪೂವ೯ ಸಿದ್ದತೆಗಾಗಿ ಇಂದು 10.30ಕ್ಕೆ ತಮ್ಮ ಮನೆಗೆ ಡ್ರೆಸ್ ಬದಲಾವಣೆಗಾಗಿ ಬೈಕ್ನಲ್ಲಿ ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.
ಅರ್ತಿಲ ತಿರುವಿನಲ್ಲಿ ದ್ವಿಚಕ್ರ ವಾಹನವು ರಸ್ತೆ ಒಂದು ಬದಿಗೆ ಮಗುಚಿ ಬಿದ್ದಿದ್ದು, ಅಪಘಾತಕ್ಕೆ ಒಳಗಾದ ಅವರು ಇನ್ನೊಂದು ಕಡೆ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೈಕ್ ಸ್ಕಿಡ್ ಆಗಿ ಈ ಘಟನೆ ನಡೆಯಿತೇ ಅಥವಾ ಯಾವುದಾದರೂ ವಾಹನ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತೇ ಎಂಬ ಬಗ್ಗೆ ಪೊಲೀಸ್ ರು ತನಿಖೆ ನಡೆಸುತ್ತಿದ್ದಾರೆ.