ಬೆಳ್ತಂಗಡಿ : ಬೆಳಾಲು ಗ್ರಾಮದ ಓಡಿಪೊಟ್ಟು ಎಂಬಲ್ಲಿ ಯ ನಿವಾಸಿ ಸುಮಾರು 26 ವರ್ಷಗಳಿಂದ ನಾಪತ್ತೆ ಯಾಗಿದ್ದು, ಕೊರೂನಾ ಎರಡನೇ ಅಲೆ ಅವರನ್ನು ಮನೆ ಸೇರಿಸಿದ ವಿದ್ಯಾಮಾನ ವರದಿಯಾಗಿದೆ.
ಬೆಳಾಲು ಗ್ರಾಮದ ಓಡಿಪೊಟ್ಟು ಮನೆಯ ಕೊರಗಪ್ಪ ಪೂಜಾರಿಯವರ ಪುತ್ರ ಶಿವಪ್ಪ ಪೂಜಾರಿ ಮರಳಿ ಮನೆ ಸೇರಿದವರು. ಶಿವಪ್ಪ ಪೂಜಾರಿಯವರು ತಮ್ಮ 18ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋಗಿದ್ದರು. ಪ್ರಾರಂಭದ ಕೆಲವು ಸಮಯದಲ್ಲಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಆ ಸಂದರ್ಭದಲ್ಲಿ ಮನೆಯವರ ಸಂಪರ್ಕದಲ್ಲಿದ್ದರು. ಬಳಿಕ ಸಂಪರ್ಕಕ್ಕೆ ಸಿಗದ ಇವರು ತರಿಕೆರೆ, ಮೈಸೂರು ಕಡೆಗಳಲ್ಲಿ ಕೆಲಸಮಾಡುತ್ತಿದ್ದು, ಪ್ರಸ್ತುತ ಮೈಸೂರಿನ ಹೊಟೇಲೊಂದರಲ್ಲಿ ಅಡಿಗೆ ಕೆಲಸಗಾರರಾಗಿ ಉದ್ಯೋಗದಲ್ಲಿದ್ದರು.
ಇವರಿಗೆ ತರೀತರಿಕೆರೆಯ
ಮೀನಾಕ್ಷಿಯವರೊಂದಿಗೆ ವಿವಾಹವಾಗಿದ್ದು, ಪುತ್ರ ಪ್ರಸನ್ನ ಕುಮಾರ್, ಮಗಳು ಪ್ರಾರ್ಥನಾ
ರೊಂದಿಗೆ ವಾಸ್ತವ್ಯವಿದ್ದರು. ಇದೀಗ ಲಾಕ್ಡೌನ್ ಘೋಷಣೆಯಾಗಿದ್ದು,ಮೈಸೂರಿನಲ್ಲಿ ಹೊಟೇಲುಗಳು ಬಂದ್ಆಗಿರುವುದರಿಂದ ಇವರು ಲಾರಿಯಲ್ಲಿ ಬಂಟ್ವಾಳಕ್ಕೆ ಬಂದಿದ್ದರು.ಶಿವಪ್ಪಪೂಜಾರಿಯವರು ಬಂಟ್ವಾಳದಲ್ಲಿರುವ ವಿಷಯ ಬೆಳಾಲಿನ ಮುಸ್ಲಿಂಕುಟುಂಬದವರಮೂಲಕಬೆಳಾಲಿನಲ್ಲಿರುವ ತಮ್ಮ ಮನೆಯವರ ಬಗ್ಗೆ ತಿಳಿಸಿದ್ದರು. ವಿಚಾರ ತಿಳಿದ ಬೆಳಾನಲಿನವರಾದ ತಾರಿದಡಿ ಆದಂ, ಆದರ್ಶನಗರದ ಉಸ್ಮಾನ್, ಕಬೀರ್, ಪರಂಗಿಪೇಟೆಯ ಅಧ್ಯಾಪಕ ಮುಸ್ತಪ ಕೌಸರಿ ಇವರುಗಳ ನೆರವಿನೊಂದಿಗೆ ಬೆಳಾಲಿನ ಓಡಿಪೊಟ್ಟು ಮನೆಗೆ ಕರೆತರುವಲ್ಲಿ ಸಹಕರಿಸಿದರು. ಮೇ 6 ರಂದು ಶಿವಪ್ಪರವರ ಓಡಿಪೊಟ್ಟು ಮನೆಯ ಸಹೋದರರು, ಸಂಬಂಧಿಕರು ಬಂಟ್ವಾಳಕ್ಕೆ ಹೋಗಿ ಮನೆಗೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.