ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು
ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ , ಕುಲಾಲ, ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಸಹಯೋಗದಲ್ಲಿ ಸಂಘದ ವತಿಯಿಂದ ಬೆಳ್ತಂಗಡಿ ತಾಲೂಕಿನ ಸ್ವಜಾತಿ ಪ್ರತಿಭಾವಂತ ಮತ್ತು ಅರ್ಹ ಬಡ ವಿದ್ಯಾರ್ಥಿಗಳಿಗೆ 2020-2021ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್
ಇವರಿಗೆ ಮತ್ತು ಕುಲಾಲ, ಕುಂಬಾರ ಸಮಾಜದಿಂದ ಆಯ್ಕೆಯಾದ ನೂತನ ಗ್ರಾಮ ಪಂಚಾಯತ್ ಸದಸ್ಯರಿಗೆಅಭಿನಂದನಾ ಕಾರ್ಯಕ್ರಮಸರಕಾರದ ಕೋವಿಡ್-19 ನಿಯಮವನ್ನು ಪಾಲಿಸಿ ಎ.18ರಂದು ಕುಲಾಲ ಮಂದಿರದಲ್ಲಿ ಜರುಗಿತು.
ನಿರೀಕ್ಷೆಗೂ ಮೀರಿ ಅನುದಾನ : ಎಂಎಲ್ಸಿ
ಕಾಯ೯ಕ್ರಮವನ್ನು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರ ಸೇವಾ ಸಂಘ
ಉತ್ತಮವಾಗಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸಂಘಕ್ಕೆ ತನ್ನ ಎಂಎಲ್ಸಿ ನಿಧಿಯಿಂದ ನಿಮ್ಮ
ನಿರೀಕ್ಷೆಗೂ ಮೀರಿ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಸಂಘ, ಸಂಘಟನೆಗಳು ಸಮಾಜದ ಅಭಿವೃದ್ಧಿಯ ಮುಖ್ಯ ಧ್ಯೇಯವನ್ನು ಇಟ್ಟುಕೊಳ್ಳಬೇಕು, ಜವಾಬ್ದಾರಿ, ಸಾಮೂಹಿಕ ನಿಧಾ೯ರ, ನಡತೆ ಹಾಗೂ ಆಥಿ೯ಕ ಶುದ್ದತೆ ಸಂಘದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
10 ಲಕ್ಷ ದ ವೆಚ್ಚದ ಕಾಮಗಾರಿ ನಡೆದಿದೆ: ಹರೀಶ್ ಕಾರಿಂಜೆ
ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ ಇದರ ಅಧ್ಯಕ್ಷ ಹರೀಶ್ ಕಾರಿಂಜ ವಹಿಸಿ, ಗುರುವಾಯನಕೆರೆ ಕುಲಾಲ ಮಂದಿರ ಪುನರ್ ನವೀಕರಣ ಆಗುತ್ತಿದ್ದು, ಮಂದಿರವನ್ನು ವಿಸ್ತಾರಗೊಳಿಸಿ, ಇನ್ನಷ್ಟು
ಸೌಲಭ್ಯ ಅಳವಡಿಸುವ ನೀಡುವ ನಿಟ್ಟಿನಲ್ಲಿ ರೂ.10 ಲಕ್ಷ ವೆಚ್ಚದ ಕೆಲಸ ನಡೆದಿದೆ ಎಂದು ಹೇಳಿದರು. ಬೆಳ್ತಂಗಡಿ ಕ್ಷೇತ್ರದ ಶಾಸಕರು ಈಗಾಗಲೇ ರೂ.35 ಲಕ್ಷ ನೀಡಿದ್ದು, ಸಂಘಕ್ಕೆ ನಿವೇಶನ ಖರೀದಿಸುವಂತೆ ಸಲಹೆಯನ್ನು ಸಹ ನೀಡಿದ್ದಲ್ಲದೆ, ನಿವೇಶನ ಖರೀದಿಸಿದರೆ ಹೆಚ್ಚುವರಿಯಾಗಿ ರೂ.75 ಲಕ್ಷ ಅನುದಾನ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಶಿಕ್ಷಣದ ಪ್ರೋತ್ಸಾಹಕ್ಕಾಗಿ ಸಂಘದಿಂದ ನೀಡುವ ಈ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿ ಪ್ರಜ್ಞಾವಂತ ನಾಗರಿಕರಾಗಿ ಬಾಳುವಂತೆ ಕರೆ ನೀಡಿದರು.
ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿ:ಮಯೂರ್
ಮುಖ್ಯ ಅತಿಥಿಗಳಾಗಿದ.ಕ.ಜಿಲ್ಲಾ ಕುಲಾಲರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ನಮ್ಮ ಹಿರಿಯರು ಸದುದ್ದೇಶದಿಂದ ಸ್ಥಾಪಿಸಿದ ಮಾತೃ ಸಂಘದ ಅಡಿಯಲ್ಲಿ ಬರುವ ಎರಡು ದೇವಸ್ಥಾನಗಳಿದ್ದು, ಇದರಲ್ಲಿ ಮಂಗಳೂರು ಶ್ರೀ ವೀರನಿರಾಯಣ ದೇವಸ್ಥಾನ ಅಭಿವೃದ್ಧಿ
ಯಾಗುತ್ತಿದ್ದು, ಈ ಪುಣ್ಯ ಕಾಯ೯ಕ್ಕೆ ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು.
ಬೆಳ್ತಂಗಡಿ ಯಲ್ಲಿ ಸಂಘದ 11ಶಾಖೆ : ಭಾಸ್ಕರ್ ಎಂ.ಪೆರುವಾಯಿ
ಯುವ ವಕೀಲರು ಮತ್ತು ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಭಾಸ್ಕರ ಎಂ. ಪೆರುವಾಯಿ ಮಾತನಾಡಿ, ಕುಂಬಾರ ಗುಡಿಕೈಗಾರಿಕಾ ಸಹಕಾರಿ ಸಂಘದಿಂದ ಬೆಳ್ತಂಗಡಿ ತಾಲೂಕಿಗೆ 20 ತಿಗರಿಯನ್ನು ನೀಡಿದ್ದು, ಸಂಘದ ವತಿಯಿಂದ ಬೆಳ್ತಂಗಡಿ ಯಲ್ಲಿ ಶೀಘ್ರವಾಗಿ ಸಂಘದ 11 ಶಾಖೆ ಆರಂಭ ಆರಂಭವಾಗಲಿದ್ದು, ಎಲ್ಲರ ಸಹಕಾರ ಬಯಸಿದರು.ಪ್ರಕ್ರಿಯೆ ಸಹಾಯಕರು, ನೋಟು ಮುದ್ರಣಾಲಯ ಆರ್.ಬಿ.ಐ ಮೈಸೂರುನ ಮನೋಜ್ ಕುಲಾಲ್, ಗ್ರಾ.ಪಂ.ಕುವೆಟ್ಟುನ ಅಧ್ಯಕ್ಷೆ ಶ್ರೀಮತಿ ಆಶಾಲತಾ ತಿಲಕ್ರಾಜ್ ಕುಲಾಲ್, ನಾಟಕ, ಜಾದು, ಚಲನಚಿತ್ರ ಕಲಾವಿದರು ಹಾಗೂ ನಿರ್ದೇಶಕರಾದ ರಾಜೀವ್ ಬಿ.ಹೆಚ್, ಬೆಳ್ತಂಗಡಿ, ಕುಲಾಲ-ಕುಂಬಾರರ ಯುವ ವೇದಿಕೆ, ಬೆಳಂಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಕುಲಾಲ್ ಮಾತನಾಡಿ ಕಾಯ೯ಕ್ರಮಕ್ಕೆ ಶುಭಾ ಹಾರೈಸಿದರು.
ಎಂಎಲ್ಸಿ ಪ್ರತಾಪಸಿಂಹ ನಾಯಕರಿಗೆ ಅಭಿನಂದನೆ : ವಿದ್ಯಾರ್ಥಿ ವೇತನ ವಿತರಣೆ
ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಕುಲಾಲ-ಕುಂಬಾರ ಸಮಾಜದಿಂದ ಚುನಾಯಿತರಾದ
34 ನೂತನ ಗ್ರಾ. ಪಂ ಸದಸ್ಯರನ್ನು ಹಾಗೂ . ಸಮಾಜದ ಸಾಧಕರಾದ ಲೋಕೇಶ್ ಕುಲಾಲ್ ಕರಾಯ, ಚಂದ್ರಹಾಸ್ ಕುಂಬಾರ ಇವರನ್ನು ಅಭಿನಂದಿಸಲಾಯಿತು.
ಪ್ರತಿಭಾವಂತ ಅಹ೯ ಬಡ ವಿದ್ಯಾರ್ಥಿಗಳಿಗೆ 2020-2021ನೇ ವಷ೯ದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸಂಘದ ಮೇನೇಜರ್ ಮುಖೇಶ್ ಕುಲಾಲ್ ಹಾಗೂ ಸಿಬ್ಬಂದಿಗಳನ್ನು, ವಿವಿಧ ಗ್ರಾಮಗಳ ಸಂಘದ ಪದಾಧಿಕಾರಿಗಳನ್ನು, ಸಹಕರಿಸಿದವರನ್ನು ಗುರುತಿಸಲಾಯಿತು.
ವಂಶಿಕಾ ಸಂಜಯನಗರ ಪ್ರಾಥಿ೯ಸಿದರು. ಸಂಘದ ರಾಜ್ಯ ಸಂಘಟನಾ ಕಾಯ೯ದಶಿ೯, ನಿವೃತ್ತ ಕಂದಾಯ ನಿರೀಕ್ಷಕ ಹೆಚ್ ಪದ್ಮಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಸಂಘದ ಬೆಳವಣಿಗೆ ಬಗ್ಗೆ ತಿಳಿಸಿ ಸ್ವಾಗತಿಸಿದರು. ಸಂಘದ ಸದಸ್ಯ ಪುಷ್ಷರಾಜ್ ಕುಲಾಲ್ ಲಾಯಿಲ ಹಾಗೂ ಕಾವ್ಯಶ್ರೀ ಕಾಯ೯ಕ್ರಮ ನಿರೂಪಿಸಿದರು. ತಾ.ಪಂ ಸದಸ್ಯೆ ವಸಂತಿ ಲಕ್ಷ್ಮಣ್ ಕುಲಾಲ್ ವಂದಿಸಿದರು.