ಓಡಿಲ್ನಾಳ : ಎ.14ರಂದು ಸಂಜೆ ಮಳೆ-ಗಾಳಿಗೆ ಗ್ರಾಮದ ಕೆರೆಕೋಡಿ ಜಾನಕಿ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಇದೇ ಗ್ರಾಮದ ಲತಾ ರಾಜೇಶ್ ಎಂಬವರ ಮನೆಯ ಹಂಚು, ಶೀಟ್
ಗಾಳಿಗೆ ಹಾರಿ ಹೋಗಿದೆ. ಪರಾರಿ ಮನೆಯ ಪದ್ಮ ಮೂಲ್ಯ ಇವರ ಅಡಿಕೆ ತೋಟದಲ್ಲಿ ಅಡಿಕೆ ಮರಗಳು ತುಂಡಾಗಿ ಮರಗಳು ನಾಶಗೊಂಡಿದೆ. ಸುಳಿಗಾಳಿಗೆ ರೇಷ್ಮೇ ರೋಡು ಪರಿಸರದಲ್ಲಿ ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ ಬಿದ್ದು, ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ.