ತಾಲೂಕು ಸುದ್ದಿಸಾಧಕರು

ಭಕ್ತರ ಅಭೀಷ್ಠೆಗಳನ್ನು ಈಡೇರಿಸುವ ಕಾರಣಿಕ ಕ್ಷೇತ್ರ ಪುತ್ರಬೈಲಿನ ಶಕ್ತಿ ಸ್ವಾಮಿ ಕೊರಗಜ್ಜ

ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ ಕಂಗೊಳಿಸುವ ಲಾಯಿಲ ಗ್ರಾಮ ಪುತ್ರಬೈಲಿನಲ್ಲಿ ನೆಲೆನಿಂತಿರುವ ಶ್ರೀ ಸ್ವಾಮಿ ಕೊರಗಜ್ಜ ದೈವದ ಕ್ಷೇತ್ರವು ಭಕ್ತರ ಅಭೀಷ್ಠೆಗಳನ್ನು ಈಡೇರಿಸುವ ಜಿಲ್ಲೆಯ ಕಾರಣಿಕ ಹಾಗೂ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿ ಬೆಳೆಯುತ್ತಿದೆ.


ಲಾಯಿಲ  ಗ್ರಾಮದ ಪುತ್ರಬೈಲು ನಿವಾಸಿ ಶ್ರೀ ಸೀತಾರಾಮ ಭೈರ ಈ ದೈವಸ್ಥಾನದ ಆಡಳಿತ ಮೊಕ್ತೇಸರರು. ಬಡತನ ಹಾಗೂ ಬಹಳಷ್ಟು ಕಷ್ಟ-ಕಾರ್ಪಣ್ಯಗಳಿಂದ ಬಳಲುತ್ತಿದ್ದ ಸಮಯದಲ್ಲಿ ತನ್ನ ಕುಟುಂಬಕ್ಕೆ ಆಗಾಧವಾದ ಅತೀ ದೊಡ್ಡ ಎದುರಿಸಲಾಗದ ಸಮಸ್ಯೆ ಎದುರಾಯಿತು. ಜೀವನವೇ ಅಂತಿಮ ಎನ್ನುವ ಕ್ಷಣದಲ್ಲಿ ತನ್ನ ಆತ್ಮೀಯರಾದ ದೈವಾಂಶ ಗುರುಗಳಾದ ಪದ್ಮುಂಜದ ಶ್ರೀ ವೆಂಕಪ್ಪ ಪಂಡಿತರಲ್ಲಿ ನಡೆಯುವ ಸ್ವಾಮಿ ಕೊರಗಜ್ಜ ದೈವದ ನೇಮದಲ್ಲಿ ತನ್ನ ನೋವನ್ನು ಅಜ್ಜನ ಮುಂದೆ ನಿವೇದಿಸಿಕೊಂಡರು. ಅಜ್ಜ ನುಡಿದಂತೆ ಕೇವಲ ಒಂದು ತಿಂಗಳ ಅಂತರ ಅವರಿಗೆ ಎದುರಾಗಿದ್ದ ಸರ್ವ ಕಷ್ಟ-ಕಾರ್ಪಣ್ಯಗಳು ನಿವಾರಣೆಗೊಂಡು ಅಜ್ಜನ ಮಹಾಪವಾಡವೇ ಸೃಷ್ಟಿಯಾಯಿತು.
ಸ್ವಪ್ನದಲ್ಲಿ ಕಾಣಿಸಿಕೊಂಡ ಕೊರಗಜ್ಜ:


ಈ ಎಲ್ಲಾ ಘಟನೆಗಳ ಬಳಿಕ ಸೀತಾರಾಮ ಭೈರ ಅವರಿಗೆ ಒಂದು ದಿನ ಸ್ವಪ್ನದಲ್ಲಿ ಕೊರಗಜ್ಜ ದೈವ ಕಾಣಿಸಿಕೊಂಡು ನನ್ನನ್ನು ಗುಡಿ ಕಟ್ಟಿ ಸ್ಥಾಪಿಸಿ ಆರಾಧನೆ ಮಾಡಿಕೊಂಡು ಬರಬೇಕು. ನನ್ನನ್ನು ನಂಬಿದಲ್ಲಿ ನಿನ್ನನ್ನು ಹಾಗೂ ಸರ್ವ ಭಕ್ತರಿಗೂ ಇಂಬು ಕೊಡುತ್ತೇನೆ. ತನ್ನ ಕಷ್ಟಗಳನ್ನು ನಿವೇದಿಸಿಕೊಂಡು ಇಲ್ಲಿ ಬರುವವರಿಗೆ ಪೂರ್ಣ ಅನುಗ್ರಹ ನೀಡುತ್ತೇನೆ. ಸಕಲ ಕಷ್ಟಗಳಿಗೆ ಪರಿಹಾರ ಒದಗಿಸುತ್ತೇನೆ ಎಂದು ಆಭಯ ನೀಡಿದರು.

ಕೊರಗಜ್ಜನಿಗೆ ಭವ್ಯವಾದ ಗುಡಿ

ಕೊರಗಜ್ಜ ದೈವದ ಅಭಯದ ನುಡಿಯಂತೆ ಸೀತಾರಾಮ ಭೈರರವರು ಊರಿನ ಹಿರಿಯರಲ್ಲಿ ಈ ವಿಷಯವನ್ನು ತಿಳಿಸಿ, ಸ್ವಾಮಿ ಕೊರಗಜ್ಜ ದೈವಕ್ಕೆ ಭವ್ಯವಾದ ಸುಂದರ ಗುಡಿಯನ್ನು ನಿರ್ಮಿಸಿದರು. 2015 ಮೇ 3ರಂದು ವೈದಿಕ ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯಿಂದ ಗುಡಿಯ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು. ಪ್ರತಿ ಸಂಕ್ರಮಣದಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ತಮ್ಮ ಅಭಿಷ್ಠೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ಸಂಕ್ರಮಣದಂದು ಅಗೇಲು ಸೇವೆ 


ಪುತ್ರಬೈಲಿನ ಕೊರಗಜ್ಜ ಸ್ವಾಮಿಯ ಗುಡಿಯಲ್ಲಿ ಪ್ರಮುಖವಾಗಿ ನಡೆಯುತ್ತಿರುವುದು ಅಗೇಲು ಸೇವೆ. ಊರ ಹಾಗೂ ಪರವೂರ ಭಕ್ತಾದಿಗಳು ಬಂದು ತಾಂಬೂಲ, ಶೇಂದಿ( ಬಾಜೆಲ್), ಚಕ್ಕುಲಿಯನ್ನಿಟ್ಟು ತಮ್ಮ ಕಷ್ಟಗಳನ್ನು ಅಜ್ಜನ ಮುಂದೆ ಪ್ರಾರ್ಥಿಸಿಕೊಳ್ಳುತ್ತಾರೆ. ಕೆಲವೇ ದಿನಗಳಲ್ಲಿ ಅವರ ಬಯಕೆ ಈಡೇರಿದಾಗ ಅವರು ಶ್ರೀ ಕ್ಷೇತ್ರಕ್ಕೆ ಬಂದು ಅಗೇಲು ಸೇವೆ ಕೊಟ್ಟು ಕೃತಾರ್ಥರಾಗುತ್ತಾರೆ.
ಇಲ್ಲಿ ಪ್ರತಿ ಸಂಕ್ರಮಣದಂದು ಮಧ್ಯಾಹ್ನ 12.15ಕ್ಕೆ ಇಲ್ಲಿ ಅಗೇಲು ಸೇವೆ ಆರಂಭಗೊಳ್ಳುತ್ತದೆ. ಭಕ್ತಾದಿಗಳು ತಮ್ಮ ಬಯಕೆಗಳನ್ನು ಪ್ರಾರ್ಥನೆಯ ಮೂಲಕ ಅಜ್ಜನಲ್ಲಿ ನಿವೇದಿಸಿಕೊಂಡು ಅವು ಈಡೇರಿದಾಗ ಹೇಳಿಕೊಂಡ ಹರಕೆಯನ್ನು ತಂದೊಪ್ಪಿಸುವುದು ಇಲ್ಲಿಯ ವಾಡಿಕೆ.

ಇಷ್ಟಾಥ೯ ಈಡೇರುವ ಕ್ಷೇತ್ರ 

ಇಷ್ಟಾರ್ಥ ಸಿದ್ಧಿಗಾಗಿ ಉದ್ಯೋಗಾವಕಾಶ, ಉದ್ದಿಮೆ, ಅಭಿವೃದ್ಧಿ, ಆರೋಗ್ಯ ಈ ಕಾರಣಿಕ ಕ್ಷೇತ್ರದಲ್ಲಿ ಹರಕೆ ಹೇಳಿಕೊಳ್ಳುವ ಸಂಪ್ರಾದಾಯವಿದೆ.
ಮದುವೆಯಾಗದವರು ಇಲ್ಲಿ ಪ್ರಾರ್ಥಿಸಿಕೊಂಡರೆ ಕಂಕಣ ಭಾಗ್ಯ ಆದ ಎಷ್ಟೋ ಉದಾರಣೆಗಳಿವೆ. ವಿಶೇಷವಾಗಿ ಎಲ್ಲಿಯೂ ವಾಸಿಯಾಗದ ಚರ್ಮರೋಗವು ಇಲ್ಲಿಯ ಕೊರಗಜ್ಜ ದೈವದ ಕರಿಗಂಧ ಪ್ರಸಾದ ಸೇವಿಸಿದ ನಂತರ

ಗುಣಮುಖವಾದ ಹಲವಾರು ನಿದರ್ಶನಗಳಿವೆ. ಮಕ್ಕಳಾಗದ ದಂಪತಿಗಳು ಇಲ್ಲಿ ಅಜ್ಜನಿಗೆ ಬೆಳ್ಳಿಯ ಮುಟ್ಟಾಳೆ ಹರಕೆ ಹೇಳಿದರೆ ಹಲವಾರು ದಂಪತಿಗಳಿಗೆ ಸಂತಾನ ಭಾಗ್ಯವಾಗಿದೆ. ಸರಿಯಾಗಿ ಮಾತುಬಾರದ ಮಕ್ಕಳಿಗೆ ಗಂಟೆಯ ಹರಕೆ ಹೇಳಿಕೊಂಡಾಗ ಮಾತು ಬಂದ ನಿದರ್ಶನಗಳಿವೆ. ಜಾನುವಾರು, ಕೃಷಿ ಹಾಗೂ ಇನ್ನಿತರ ವ್ಯವಹಾರ ನಡೆಸುವಾಗ ಇಲ್ಲಿ ವಿಶೇಷ ಹರಕೆಯನ್ನು ಹೇಳಿಕೊಂಡು ಬೇಡಿಕೆ ಈಡೇರಿದ ನಂತರ ಇಲ್ಲಿ ಬಂದು ಸೇವೆ ಸಲ್ಲಿಸುತ್ತಾರೆ.

🔸️ ಈ ಕ್ಷೇತ್ರದಲ್ಲಿ ಪ್ರತಿ ಸಂಕ್ರಮಣದಂದು ಕೊರಗಜ್ಜ ದೈವಕ್ಕೆ ಅಗೇಲು ಸೇವೆ ಹಾಗೂ ಹರಕೆಯ ಕೋಲವು ನಡೆಯುತ್ತದೆ.

🔹️ಬರುವ ಮೇ ತಿಂಗಳ 1ನೇ ತಾರೀಕಿನಂದು ಶನಿವಾರ ಶ್ರೀ ಕೊರಗಜ್ಜ ದೈವದ ವಾರ್ಷಿಕ ನೇವೋತ್ಸವ ನಡೆಯಲಿದೆ.

ನಿಮ್ಮದೊಂದು ಉತ್ತರ