ತಾಲೂಕು ಸುದ್ದಿ

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಗಾ೯ವಣೆಗೊಂಡ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

*

ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ವರ್ಗಾವಣೆ ಮತ್ತು ಪದೋನ್ನತಿ ಹೊಂದಿದ ಸಿಬ್ಬಂದಿಯವರಿಗೆ ಠಾಣೆಯಲ್ಲಿ ಎ.2 ರಂದು ಬೀಳ್ಕೊಡುಗೆ ಕಾರ್ಯಕ್ರಮ ಪಿಎಸ್ಐ ನಂದಕುಮಾರ್ ಎಂ.ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪುತ್ತೂರು ಎಸ್ಪಿ ಕಛೇರಿಗೆ ಹರೀಶ್ ನಾಯ್ಕ್, ಉಪ್ಪಿನಂಗಡಿ ಠಾಣೆಗೆ ಸವಿತಾ ಶೆಟ್ಟಿ ರವರು ವರ್ಗಾವಣೆ ಯಾದರೆ,ಮಧು ಕೆಆರ್ ರವರು ಪದೋನ್ನತಿ ಹೊಂದಿ ಬೆಳ್ತಂಗಡಿ ಸಂಚಾರ ಠಾಣೆಗೆ ವರ್ಗಾವಣೆಗೊಂಡಿರುತ್ತಾರೆ.              ವೇದಿಕೆಯಲ್ಲಿ ಸಂಚಾರ ಠಾಣಾ ಪಿಎಸ್ಐ ಭಾರತಿ ಶೆಟ್ಟಿ , ಪ್ರೊ.ಪಿಎಸ್ಐ ಶರತ್ ಹಾಜರಿದ್ದು ಶುಭಕೋರಿದರು.
ಎಎಸ್ಐ ರಾಮಯ್ಯ ಹೆಗ್ಡೆ ಸ್ವಾಗತಿಸಿ, ಪಿಎಸ್ ವೆಂಕಪ್ಪ ನಿರೂಪಿಸಿ ಧನ್ಯವಾದವಿತ್ತರು.

ನಿಮ್ಮದೊಂದು ಉತ್ತರ