ತಾಲೂಕು ಸುದ್ದಿ

ಬೆಳ್ತಂಗಡಿ ಪೊಲೀಸ್ ಕುಟುಂಬ ಸಮ್ಮೀಳನ: ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ದ.ಕ ಜಿಲ್ಲಾ ಪೊಲೀಸ್ ಬೆಳ್ತಂಗಡಿ ವೃತ್ತ ಪೊಲೀಸ್ ಠಾಣೆಗಳ ಪೊಲೀಸ್ ಕುಟುಂಬಗಳ ಸಮ್ಮಿಲನ 2021 ಕಾರ್ಯಕ್ರಮ ಬೆಳ್ತಂಗಡಿ ವಸತಿಗೃಹ ಆವರಣದಲ್ಲಿ ಮಾ.25 ರಂದು ನಡೆಯಿತು.


ಬೆಳಿಗ್ಗೆ ನಡೆದ ಕ್ರೀಡಾಕೂಟವನ್ನು 5 ಠಾಣೆಗಳ ಅಧಿಕಾರಿಗಳು ಮತ್ತು ನಿವೃತ್ತ ಎಎಸ್ಐ ಸಂಜೀವ ರೈ ರವರು ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು.ವೃತ್ತದ ಎಲ್ಲಾ ಠಾಣೆಗಳ ಅಧಿಕಾರಿ ಸಿಬ್ಬಂದಿ ಕುಟುಂಬ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆಯ ಸಮಯ ಬಂಟ್ವಾಳ ಡಿವೈಎಸ್ಪಿ ವಾಲೆಂಟೈನ್ ಡಿಸೋಜ ಹಾಜರಿದ್ದು ಪೊಲೀಸ್ ಕುಟುಂಬದ ಸದಸ್ಯರ ಒಗ್ಗಟ್ಟು ಮತ್ತು ಪ್ರತಿಭೆಯ ಬಗ್ಗೆ ಪ್ರಶಂಸಿದರು.

ಈ ಸಂದರ್ಭ ಪೊಲೀಸ್ ಕುಟುಂಬ ಸದಸ್ಯರು ಡಿವೈಎಸ್ಪಿ ವಾಲೆಂಟೈನ್ ಡಿಸೋಜ, ಸಿಪಿಐ ಸಂದೇಶ್ ಪಿಜಿ, ಪಿಐ ರವಿ ಬಿಎಸ್, ಮುಖ್ಯಮಂತ್ರಿ ಪದಕ ಪಡೆದ ವೆಂಕಟೇಶ್ ನಾಯ್ಕ್, ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟ ಎಸ್ಡಿಎಂ ಶಿಕ್ಷಣ ಸಂಸ್ಥೆಯ ಶಾರೀರಿಕ ನಿರ್ದೇಶಕ ಸಂದೇಶ್ ಪೂಂಜ, ಸುವೀದ್ ,ರಾಷ್ಟ್ರೀಯ ಮಟ್ಟದ ವಾಲಿಬಾಲ್ ನಲ್ಲಿ ಪ್ರದರ್ಶನ ನೀಡಿದ ಶಶಾಂಕ್ ರನ್ನು ಸನ್ಮಾನಿಸಿ ಅಭಿನಂದಿಸಿದರು.

ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದಕ ಜಿಲ್ಲೆಯಲ್ಲಿ ವೃತ್ತ ಮಟ್ಟದಲ್ಲಿ ಪೊಲೀಸ್ ಕುಟುಂಬದ ಸದಸ್ಯರ ಸಮ್ಮಿಲನ ಕಾರ್ಯಕ್ರಮ ನಡೆಸಿದ ಹೆಗ್ಗಳಿಕೆಗೆ ಪಾತ್ರರಾದ ಬೆಳ್ತಂಗಡಿ ಸಿಪಿಐ ಸಂದೇಶ್ ಪಿ.ಜಿ ಮತ್ತು ಕಾರ್ಯಕ್ರಮ ವನ್ನು ಆಯೋಜನೆ ಮಾಡಿದ ಬೆಳ್ತಂಗಡಿ ಪಿಎಸ್ಐ ನಂದಕುಮಾರ್ ಎಂ.ಎಂ ಬಗ್ಗೆ ಎಲ್ಲಾ ಅಧಿಕಾರಿ ಕುಟುಂಬದ ಸದಸ್ಯರು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಪುಂಜಾಲಕಟ್ಟೆ ಪಿಎಸ್ಐ ಸೌಮ್ಯ, ಬೆಳ್ತಂಗಡಿ ಸಂಚಾರ ಠಾಣಾ ಪಿಎಸ್ಐ ಭಾರತಿ,ವೇಣೂರು ಠಾಣಾ ಪಿಎಸ್ಐ ಲೋಲಾಕ್ಷ, ಧರ್ಮಸ್ಥಳ ಪಿಎಸ್ಐ ಪವನ್ ಕುಮಾರ್,ಚಂದ್ರಶೇಖರ ಪ್ರೊಬೇಶನರಿ ಪಿಎಸ್ಐ ಶರತ್ ರವರು ಪೂರ್ಣವಾಗಿ ತೊಡಗಿಸಿಕೊಂಡರು. ಬೆಳಿಗ್ಗೆ ಎಎಸೈ ರಾಮಯ್ಯ ಹೆಗ್ಡೆ , ಸಂಜೆ ಮನೋಹರ ಸ್ವಾಗತಿಸಿದ್ದು , ಬೆಳ್ತಂಗಡಿ ಠಾಣಾ ಪಿಎಸ್ ವೆಂಕಪ್ಪ ನಿರೂಪಿಸಿದರು.

ನಿಮ್ಮದೊಂದು ಉತ್ತರ