ಬೆಳ್ತಂಗಡಿ: ಮಾ. 25 ರಂದು ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳ ಇಲ್ಲಿ ತೆಂಗಿನ ಸಿಪ್ಪೆಯಿಂದ ತಯಾರಿಸಿ ಅದರಲ್ಲಿ ಹೂವಿನ ಗಿಡಗಳನ್ನು ನೆಟ್ಟು ಬೇರೆ ಗಿಡಗಳಿಗೆ ತೂಗು ಹಾಕುವ ಉತ್ತಮ ಕಾರ್ಯಕ್ರಮ ತೆರೆದ ಪರಿಸರದಲ್ಲಿ ನಡೆಯಿತು.
ಈ ಕಾರ್ಯಕ್ರಮ ಮಕ್ಕಳ ಪ್ರಹಸನದೊಂದಿಗೆ ಹಾಗೂ ಕಲ್ಪಕುಂಡದ ತಯಾರಿಯ ಪ್ರಾತ್ಯಕ್ಷಿಕೆಯೊಂದಿಗೆ
ಪ್ರಾರಂಭಿಸಿದ್ದು,ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದ್ದು ಈ ಕಾರ್ಯಕ್ರಮದ ವಿಶೇಷ ಆಗಿತ್ತು.ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಇದರ ಮಾನವ ಸಂಪನ್ಮೂಲ ನಿರ್ದೇಶಕಿ ಶ್ರೀಮತಿ ಮಮತಾರಾವ್ ಆಗಮಿಸಿ ಕಾರ್ಯಕ್ರಮ ನಾರಿಕೇಳ ಕುಂಡವನ್ನು ಗಿಡಗಳಿಗೆ ತೂಗಿಸುವ ಮೂಲಕ ಉದ್ಘಾಟಿಸಿ,
“ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ.ಮಕ್ಕಳು ಇಂತಹ ಕಾರ್ಯಕ್ರಮಗಳಿಂದಲೇ ಸೃಜನ ಶೀಲರಾಗುತ್ತಾರೆ.ಎಂತಹ ಪರಿಸ್ಥಿತಿಯನ್ನೂ ಎದುರಿಸುವ ತಾಕತ್ತು ಇರುತ್ತದೆ.ಬಾಲ್ಯದಲ್ಲಿ ನಾನು ಅನೇಕ ಸದುಪಯೋಗೀ ಕಾರ್ಯ ಮಾಡಿದ ಕಾರಣ ಇಂದು ಅತ್ಯುನ್ನತ ಸ್ಥಾನದಲ್ಲಿ ಇದ್ದರೂ ನಿಭಾಯಿಸಬಲ್ಲೆ.ನೀವೂ ಸಮಯದ ಸದುಪಯೋಗ ಮಾಡಿಕೊಳ್ಳಿ.ಗಿಡಗಳನ್ನು ಬೆಳೆಸುವ ಉಳಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಿ.ಅದಕ್ಕಾಗಿ ಇಂತಹ ಶಾಲೆಗಳು ಬೇಕಾದಷ್ಟು ಅವಕಾಶಗಳನ್ನು
ನೀಡುತ್ತದೆ.ಅದನ್ನು ಚೆನ್ನಾಗಿ ಬಳಸಿ ಮುಂದಿನ ಬದುಕಿಗೆ ಇದು ಅತ್ಯಗತ್ಯ.ಜೊತೆಗೆ ನಾನು ಇದರಿಂದ ಕಲಿತುಕೊಂಡು ಇತರರಿಗೂ ತಲುಪಿಸುವ ಪ್ರಯತ್ನ ಮಾಡುತ್ತೇನೆ.ಉತ್ತಮ ಹವ್ಯಾಸಗಳನ್ನು ವಿದ್ಯಾರ್ಥಿಗಳಾಗಿ ಬೆಳೆಸಿಕೊಳ್ಳಿ.ಇಲ್ಲವಾದರೆ ಇಂದಿನಿಂದ ಬೆಳೆಸಿಕೊಳ್ಳಲೇ ಬೇಕು.ಇದು ಸೃಜನಾತ್ಮಕತೆ ಬೆಳೆಯಲು ಸಹಕಾರಿ ಎಂದು ಕಿವಿ ಮಾತು ಹೇಳಿದರು.ಜೊತೆಗೆ ಮೊಬೈಲ್ ಟಿ.ವಿ.ಬಳಕೆ ರುಚಿ ತಕ್ಕಷ್ಟು ಉಪ್ಪು ಎನ್ನುವಂತೆ ಬಳಸಿ ಅತಿಯಾಗಿ ಬಳಸಿದರೆ ಆರೋಗ್ಯಕ್ಕೆ ಹಾನಿಕಾರಕ. ಬದಲಿಗೆ ಪೃಕೃತಿಯ ಜೊತೆಗೆ ಬಾಳಿ.ಅದನ್ನು ಆದಷ್ಟು ಅದನ್ನು ಗಮನಿಸಿ ನೆಮ್ಮದಿ ನೀಡುತ್ತದೆ.ವಿದ್ಯೆ ಎಂಬುದು ಕಳೆದು ಹೋದ ಸೊತ್ತು ಅದನ್ನು ಎಲ್ಲೇ ಸಿಕ್ಕರೂ ಹೆಕ್ಕಿಕೊಳ್ಳಿ.ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ,ಸದ್ಭಾವನೆಯಿಂದ ಬದುಕಿ” ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ನಂತರ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ ಇವರು ಈ ಕಾರ್ಯಕ್ರಮದಲ್ಲಿ ನೀವು ಕಂಡುಕೊಂಡ ಉತ್ತಮ ಅಂಶವನ್ನು ಸದಾ ಬಳಸಿಕೊಳ್ಳಿ.ಕಲಿತುಕೊಂಡ ವಿಚಾರಗಳನ್ನು ಇತರರಿಗೂ ತಲುಪಿಸಿ ಹಾಗೂ ಪರಿಸರ ಉಳಿಸಿ ಬೆಳೆಸುವಲ್ಲಿ ಜೊತೆಯಾಗೋಣ ಎಂದು ನುಡಿದರು. ಹಾಗೂ ವಿದ್ಯಾರ್ಥಿಗಳೇ ತಯಾರಿಸಿದ ಕಲ್ಪ ವೃಕ್ಷಕುಂಡವನ್ನೇ ಅತಿಥಿಗಳಿಗೆ ಕಾಣಿಕೆಯಾಗಿ ನೀಡಲಾಯಿತು.ಮಾ.ಜಸ್ವಿನ್ ವಂದಿಸಿದರು.
ಪರಿಸರ ಸಂಘ ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ,ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.