ಜಿಲ್ಲಾ ವಾರ್ತೆತಾಲೂಕು ಸುದ್ದಿರಾಜ್ಯ ವಾರ್ತೆ

ಉಭಯ ಜಿಲ್ಲೆಗಳ ೨೦ ಕಂಬಳ ಕೂಟಗಳಿಗೆ ಸರಕಾರದಿಂದ ರೂ.1 ಕೋಟಿ ಸಹಾಯಧನ

ಬೆಳ್ತಂಗಡಿ: ಕರಾವಳಿಯ ಜಾನಪದ ಕ್ರೀಡೆ ಕಂಬಳದ ಪ್ರೋತ್ಸಾಹಕ್ಕಾಗಿ ಪ್ರತಿ ಕಂಬಳಕ್ಕೆ ರೂ.5ಲಕ್ಷದಂತೆ ಒಟ್ಟು ರೂ.1 ಕೋಟಿ ಸಹಾಯಧನ ಮಂಜೂರು ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಇದರಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯ ತಲಾ 10 ಕಂಬಳಗಳಿಗೆ ಸಮಾನ ನೆರವು ಸಿಗಲಿದೆ. ದ.ಕ ಜಿಲ್ಲೆಯಲ್ಲಿ 1೦ ಕಂಬಳಗಳನ್ನು ನಡೆಸಲು ತಲಾ ರೂ.೫ ಲಕ್ಷದಂತೆ ಒಟ್ಟು ರೂ.5೦ ಲಕ್ಷ ಮತ್ತು ಉಡುಪಿ ಜಿಲ್ಲೆಯಲ್ಲಿ 1೦ ಕಂಬಳಗಳನ್ನು ನಡೆಸಲು ತಲಾ ರೂ.5 ಲಕ್ಷದಂತೆ ರೂ.5೦ ಲಕ್ಷ ಬಿಡುಗಡೆ ಮಾಡಲಾಗಿದೆ. ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮದಿಂದ ಈ ಸಹಾಯಧನವನ್ನು ನೀಡಲಾಗಿದೆ.
ಪ್ರವಾಸೋಧ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ ಯೋಗೀಶ್ವರ್ ಕೆಲವು ದಿನಗಳ ಹಿಂದೆ ಪ್ರವಾಸೋಧ್ಯಮ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ದ.ಕ ಜಿಲ್ಲೆಗೆ ಎರಡು ದಿನಗಳ ಭೇಟಿ ನೀಡಿದ್ದರು. ಈ ಸಂದರ್ಭ ಕಂಬಳ ವೀಕ್ಷಿಸಿ ಸ್ಥಳದಲ್ಲಿಯೇ ಪ್ರತಿ ಕಂಬಳಕ್ಕೆ ರೂ.೫ ಲಕ್ಷ ಸಹಾಯಧನ ಘೋಷಣೆ ಮಾಡಿದ್ದರು. ಅದರಂತೆ ಈಗ ಅಧೀಕೃತವಾಗಿ ನೆರವು ಮಂಜೂರು ಮಾಡಿದೆ.

ನಿಮ್ಮದೊಂದು ಉತ್ತರ