ಬೆಳ್ತಂಗಡಿ: ಬೆಳ್ತಂಗಡಿಯ ಚರ್ಚ್ ರಸ್ತೆಯ ಕಲ್ಲಗುಡ್ಡೆಯಲ್ಲಿ ಸ್ಕಾರ್ಪಿಯೋ ವಾಹನ ಅಪಘಾತವಾಗಿ ಓರ್ವ ಗಂಭೀರ ಗಾಯಗೊಂಡಿದ್ದು, ನಾಲ್ಕು ಮಂದಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾದ ಘಟನೆ ಮಾ.೧೧ರಂದು ನಡೆದಿದೆ.
ಸವಣಾಲು ಜೈನ ಬಸದಿಗೆ ೭ ಜನ ಸ್ನೇಹಿತರು ವಿಹಾರಕ್ಕಾಗಿ ಬಂದು ವಾಪಸ್ ಹೋಗುತ್ತಿರುವ ಸಂದರ್ಭದಲ್ಲಿ ಕಲ್ಲಗುಡ್ಡೆ ಸಮೀಪ ಸ್ಕಾರ್ಪಿಯೋ ವಾಹನದ ಟೈರ್ ಪಂಚರ್ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ಮರಕ್ಕೆ ಡಿಕ್ಕಿ ಹೊಡೆದು ಮನೆಯಂಗಳಕ್ಕೆ ಉರುಳಿ ಬಿದ್ದಿದೆ. ಇದರಿಂದಾಗಿ ಮನೆಗೂ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.