ತಾಲೂಕು ಸುದ್ದಿ

ಮೊಗ್ರು: ದೇವಿಪ್ರಸಾದ್ ಕಡಮ್ಮಾಜೆ ಯವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ*

*

ಮೊಗ್ರು: ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಇಲಾಖೆಯ ೨೦೧೯-೨೦ನೇ ಸಾಲಿನ ಆತ್ಮ ಯೋಜನೆಯಡಿ ಸಮಗ್ರ ಕೃಷಿ ವಿಭಾಗದಲ್ಲಿ ಮೊಗ್ರು ಗ್ರಾಮದ ಕಡಮ್ಮಾಜೆ ಮನೆಯ ದೇವಿಪ್ರಸಾದ್ ರವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಲಭಿಸಿದೆ.
ಇವರು ಕಳೆದ ೩೦ ವರ್ಷಗಳಿಗಿಂತಲೂ ಅಧಿಕ ಸಮಯಗಳಿಂದ ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೆ, ಸಾವಯವ ಕೃಷಿಯನ್ನು ಮಾಡುತ್ತಿದ್ದು, ಇವರ ಸಾಧನೆಯನ್ನು ಪರಿಗಣಿಸಿ, ದ.ಕ. ಜಿಲ್ಲಾ ಕೃಷಿ ಇಲಾಖೆ ಇವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.
ಇವರು ಸಾಮಾಜಿಕ ಹೋರಾಟಗಾರ, ಹಾಗೂ ಕೃಷಿಕ ದಿ| ದಿನಕರಗೌಡ ಕಡಮ್ಮಾಜೆಯವರ ಪುತ್ರ

ನಿಮ್ಮದೊಂದು ಉತ್ತರ