ತಾಲೂಕು ಸುದ್ದಿ

ತಾಯ್ನಾಡಿಗೆ ಮರಳಿದ ವೀರ ಯೋಧ ಮೊಗ್ರು ಗ್ರಾಮದ  ಪುರಂದರ ಗೌಡರಿಗೆ ಭವ್ಯ ಸ್ವಾಗತ

ಇಳಂತಿಲ: ಭಾರತೀಯ ಸೇನೆಯಲ್ಲಿ ೨೦ ವರ್ಷಗಳ ಸುಧೀರ್ಘ ಕಾಲ ಸೇವೆಗೈದು ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ವೀರ ಯೋಧ ಮೊಗ್ರು ಗ್ರಾಮದ ಉಳಿಯ ಪುರಂದರ ಗೌಡರವರನ್ನು, ಇಳಂತಿಲ ಸೌಹಾರ್ದ ಸಮಿತಿ ವತಿಯಿಂದ ಉಪ್ಪಿನಂಗಡಿಯ ಎಚ್.ಎಂ ಹಾಲ್ ಬಳಿ ಸ್ವಾಗತಿಸಲಾಯಿತು.


ಬೆಳಿಗ್ಗೆ ಇಳಂತಿಲ ಗ್ರಾಮವನ್ನು ಪ್ರವೇಶಿಸಿದ ಅವರನ್ನು ಅಭಿಮಾನಿಗಳು ಹಾರ ಹಾಕಿ ಬರಮಾಡಿಕೊಂಡರು. ಸೌಹರ್ದ ಸಮಿತಿ ವತಿಯಿಂದ ತಾ.ಪಂ. ಮಾಜಿ ಸದಸ್ಯ, ಭೂ ಅಭಿವೃದ್ದಿ ಬ್ಯಾಂಕ್ ನಿರ್ದೇಶಕ ಮಾಯಿಲ್ತೊಡಿ ಈಶ್ವರ ಭಟ್ ಶಾಲು ಹೊದಿಸಿ, ಫಲ ಪುಷ್ಪ ನೀಡಿ, ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪುರಂದರ ಗೌಡರ ಪತ್ನಿ ವಿಶ್ವಲತಾ ರವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ಕಣಿಯೂರು ಜಿ.ಪಂ.ಸದಸ್ಯ ಕೆ.ಕೆ.ಶಾಹುಲ್ ಹಮೀದ್, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಾಜರಾಮ ಕೆ.ಬಿ, ಇಳಂತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ, ನ್ಯಾಯಾವಾದಿ ಮನೋಹರ ಕುಮಾರ್, ಇಳಂತಿಲ ಗ್ರಾ.ಪಂ.ಸದಸ್ಯ ಯು.ಕೆ ಇಸುಬು, ತಣ್ಣೀರುಪಂತ ಗ್ರಾ.ಪಂ. ಉಪಾಧ್ಯಕ್ಷ ಆಯೂಬ್ ಡಿ.ಕೆ, ಮಾಜಿ ಅಧ್ಯಕ್ಷ ಜಯವಿಕ್ರಂ, ಶ್ರೀಮತಿ ಉಮಾವತಿ, ಚಂದ್ರಶೇಖರ ಉಳಿಯ, ಸೇಸಪ್ಪ ಗೌಡ ತಾರಿದಡಿ, ಜೋಸೆಫ್ ಡಿ’ಸೋಜಾ, ಜನಾರ್ದನ ಪೂಜಾರಿ, ಫಯಾಜ್ ಅಹಮ್ಮದ್, ನಾರಯಣ ಗೌಡ, ಅಶ್ವೀರ್ ಯು.ಟಿ, ಜನಾರ್ದನ ಅಮ್ಟಂಗೆ, ಶ್ರೀನಿವಾಸ ಗೌಡ ಪರನೀರು ಮತ್ತು ಜನಾರ್ದನ ಗೌಡ, ಕುಪ್ಪಿಗುಂಡಿ ಮೊದಲಾದವರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ