ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿ ಸುವರ್ಣ ಮಹೋತ್ಸವ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಕಾಶಿಬೆಟ್ಟು ಅರಳಿಯಲ್ಲಿ ನೂತವಾಗಿ ನಿರ್ಮಿಸಲಾದ `ರೋಟರಿ ಸೇವಾ ಟ್ರಸ್ಟ್ ಭವನ’ವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಫೆ.೨೮ರಂದು ಲೋಕಾರ್ಪಣೆಗೈದರು.
ಅಧ್ಯಕ್ಷತೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೋ| ಬಿ.ಕೆ ಧನಂಜಯ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ ರೋ| ಎಂ. ರಂಗನಾಥ ಭಟ್ ಭಾಗವಹಿಸಿದ್ದರು. ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಹರೀಶ್ ಕುಮಾರ್, ರೋ| ಕೆ. ಪ್ರತಾಪಸಿಂಹ ನಾಯಕ್ ಭಾಗವಹಿಸಿದ್ದರು.
ರೋಟರಿ ಉಪರಾಜ್ಯಪಾಲ
ರೊ| ಡಾ. ಯತಿಕುಮಾರ್ ಸ್ವಾಮಿ ಗೌಡ, ಜೊನೆಲ್ ಲೆಪ್ಟಿನೆಂಟ್ ರೊ| ಮೋನಪ್ಪ ಪೂಜಾರಿ, ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್ನ ಅಧ್ಯಕ್ಷ ರೊ| ಮೇ|ಜ| ಎಂ.ವಿ ಭಟ್, ರೋಟರಿ ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರೊ| ಡಾ. ಬಿ ಯಶೋವರ್ಮ ಗೌರವ ಉಪಸ್ಥಿತರಿದ್ದರು. ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್ ಕಾರ್ಯದರ್ಶಿ ರೊ| ಡಾ. ಶಶಿಧರ ಡೋಂಗ್ರೆ, ರೋಟರಿ ಸೇವಾ ಟ್ರಸ್ಟ್ನ ಕೋಶಾಧಿಕಾರಿ ರೊ| ಶ್ರೀಕಾಂತ ಕಾಮತ್, ರೋಟರಿ ಕ್ಲಬ್ ಕಾರ್ಯದರ್ಶಿ ರೊ| ಕೆ.ವಿ ಶ್ರೀಧರ ಉಪಸ್ಥಿತರಿದ್ದರು.
ಎಂಎಲ್ಸಿ ಪ್ರತಾಪಸಿಂಹ ನಾಯಕ್ ಸ್ವಾಗತಿಸಿದರು. ಡಾ.ಜಯಕುಮಾರ್ ಮತ್ತು ಮನೋರಮ ಭಟ್ ಕಾಯ೯ಕ್ರಮ ನಿರೂಪಿಸಿದರು.