ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕಂಬಾರ ಸೇವಾ ಸಂಘ ಗುರುವಾಯನಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಸಂತಕವಿ ಶ್ರೀ ಸವ೯ಜ್ಞ ಜಯಂತಿಯನ್ನು ಫೆ.20 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.
ಕಾಯ೯ಕ್ರಮವನ್ನು ಶಾಸಕ ಹರೀಶ್ ಪೂಂಜ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸುಮಾರು ಒಂದು ಸಾವಿರಕ್ಕೂ ಹೆಚ್ಚು ತ್ರಿಪದಿಗಳನ್ನು ರಚಿಸಿದ ಸವ೯ಜ್ಞರವರು ಸಾಮಾಜಿಕ ಪರಿವತ೯ನೆ ಯ ಹರಿಕಾರರಾಗಿದ್ದು, ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದ್ದಾರೆ. ಅವರ ಬದುಕೇ ನಮಗೆಲ್ಲ ಆದಶ೯ವಾಗಿದೆ ಎಂದರು.
ಅಧ್ಯಕ್ಷತೆಯನ್ನು ಬೆಳ್ತಂಗಡಿ ತಹಶೀಲ್ದಾರ್ ರಮೇಶ್ ಬಾಬು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ ಉಪಾಧ್ಯಕ್ಷ ವೇದಾವತಿ, ನ.ಪಂ ಅಧ್ಯಕ್ಷ ರಜನಿ ಕುಡ್ವ,
ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕಂಬಾರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ರಾಜ್ಯ ಸಂಘಟನಾ ಕಾಯ೯ದಶಿ೯ ಹಾಗೂ ತಾಲೂಕು ಕುಂಬಾರ ಸಂಘದ ಅಧ್ಯಕ್ಷ
ಪದ್ಮಕುಮಾರ್ ಮಾತನಾಡಿ ಸಂತಕವಿ ಸವ೯ಜ್ಞರ ಜೀವನ ಸಂದೇಶಗಳ ಬಗ್ಗೆ ತಿಳಿಸಿದರು.
ಕಾಯ೯ಕ್ರಮದಲ್ಲಿ ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಆಶಾಲತಾ, ಸದಸ್ಯ ಸದಾನಂದ ಮೂಲ್ಯ, ನ.ಪಂ ಸದಸ್ಯ ಜನಾದ೯ನ, ಮೋಹನ್ ಕಂಚಿಂಚೆ, ಬಿ.ಹೆಚ್ ರಾಜು, ಲೋಕೇಶ್, ತಿಲಕ್ ಜಿ.ಕೆರೆ, ಪುಷ್ಪಾರಾಜ್ ಲಾಯಿಲ, ಉಮೇಶ್ ಕುಲಾಲ್, ಸಂತೋಷ್ ಭಾಗ೯ವಿ, ಮುಖೇಶ್ ಕುಲಾಲ್, ನಿವೃತ್ತ ಅರಣ್ಯಾಧಿಕಾರಿ ಮುತ್ತಪ್ಪ ಕೆ,
ಹರೀಶ್ ನಾರಾವಿ, ಶಾಂತಪ್ಪ ಕಲಿಕ, ಲಲಿತ ಕುಲಾಲ್, ಕುಂಬಾರರ ಸಂಘದ ಪದಾಧಿಕಾರಿಗಳಾದ ಸಂಜೀವ, ನಾರಾಯಣ ಕುಲಾಲ್, ಹರೀಶ್, ರಮಾನಂದ, ವಿಶ್ವನಾಥ, ವಸಂತ ಕುಲಾಲ್ ಸೇರಿದಂತೆ ಸಮಾಜ ಬಾಂಧವರು ಭಾಗವಹಿಸಿದ್ದರು.
ಉಪ ತಹಶೀಲ್ದಾರ್ ಶಂಕರ್ ಸ್ವಾಗತಿಸಿ, ಕಾಯ೯ಕ್ರಮ ನಿವ೯ಹಿಸಿದರು.