ಬೆಳ್ತಂಗಡಿ: ಕಾಳಜಿ ರಿಲೀಫ್ ಫಂಡ್ ಬೆಳ್ತಂಗಡಿ ಇದರ ಬೆಳ್ತಂಗಡಿ ಕೆನರಾ ಬ್ಯಾಂಕ್ ನಲ್ಲಿ ಇರುವ ಖಾತೆಯನ್ನು ಫೆ.8 ರಂದು ಸಮಾಪ್ತಿ ಗೊಳಿಸಲಾಯಿತು.
ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಕಾರ್ಯಕ್ರಮದಲ್ಲಿ ಘೋಷಿಸಿದಂತೆ ಎಲ್ಲಾ ಚೆಕ್ ಗಳು ನಗದೀಕರಣಗೊಂಡ ಬಳಿಕ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿರುವ ಉಳಿಕೆ ಹಣವನ್ನು ಲಾಟರಿ ಮೂಲಕ ಆಯ್ಕೆಯಾದ ಆರನೇ ಫಲಾನುಭವಿ ಚೆನ್ನು ಮುಗೇರ, ಇಂದಬೆಟ್ಟು ಗ್ರಾಮ ಇವರಿಗೆ ಶಾಸಕ ಹರೀಶ್ ಪೂಂಜ ರೂ.25,964.09 ವನ್ನು ಡಿಡಿ ಮೂಲಕ ವಿತರಿಸಿ ಕೆನರಾ ಬ್ಯಾಂಕ್ ಖಾತೆಯನ್ನು ಸಮಾಪ್ತಿಗೊಳಿಸಲಾಯಿತು.