ನಾವೂರು ಮೂಲ್ಯರ ಯಾನೆ ಕುಲಾಲರ ಸಂಘದ ಮಾಸಿಕ ಸಭೆ
ನಾವೂರು: ಮೂಲ್ಯರ ಯಾನೆ ಕುಲಾಲರ ಸಂಘ ಮಾಸಿಕ ಸಭೆಯು ಸಂಘದ ಅಧ್ಯಕ್ಷ ಸದಾನಂದ ಮೂಲ್ಯ ನಾವೂರು ಇವರ ಅಧ್ಯಕ್ಷತೆಯಲ್ಲಿ ನಾವೂರು ಕುಲಾಲ ಭವನ ಕಟ್ಟಡದಲ್ಲಿ ನಡೆಯಿತು.
ಸಭೆಯಲ್ಲಿ ಫೆ.೭ರಂದು ನಡೆಯಲಿರುವ ‘ಜಿಲ್ಲಾ ಮಟ್ಟದ ಕೆಸರ್ಡೊಂಜಿ ದಿನ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು ಹಾಗೂ ತಾಲೂಕು ಸಂಘದ ನಿರ್ದೇಶಕ ಪುಷ್ಪರಾಜ್ ಲಾಲ ಮಾರ್ಗದರ್ಶನದಲ್ಲಿ ಕ್ರೀಡಾಕೂಟದ ಕುರಿತು ಚರ್ಚಿಸಿ, ಉಪಸಮಿತಿಗಳನ್ನು ರಚಿಸಲಾಯಿತು.
ಸಂಘದ ಗೌರವಾಧ್ಯಕ್ಷ ನಾರಾಯಣ ಮೂಲ್ಯ ಕನಾಲು, ಕುಲಾಲ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ಸುರೇಶ ಇಂಚರ, ಕೋಶಾಧಿಕಾರಿ ಸತೀಶ್ ಬಾಳ್ತಾರ, ಕುಂಭಶ್ರೀ ಮಹಿಳಾ ಮಂಡಲ ಅಧ್ಯಕ್ಷೆ ಶಶಿಕಲಾ ನಾರಾಯಣ ಮೂಲ್ಯ, ಕೋಶಾಧಿಕಾರಿ ಜಯಂತಿ ಕನಲು ಮತ್ತು ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಪುಷ್ಪರಾಜ ಲಾಲ ಸ್ವಾಗತಿಸಿ, ವಿಜಯ್ ಕುಲಾಲ್ ಸುದೆಬರಿ ವಂದಿಸಿದರು.
ಈ ಸಂದರ್ಭದಲ್ಲಿ ಸುರೇಶ ಇಂಚರ ಮತ್ತು ಸಹೋದರರು ಕುಲಾಲ ಭವನಕ್ಕೆ ೫೦ ಚೆಯರ್ಗಳನ್ನು ಕೊಡುಗೆಯಾಗಿ ನೀಡಿದ್ದು, ಸಾಂಕೇತಿಕವಾಗಿ ಸಂಘದ ಅಧ್ಯಕ್ಷರಿಗೆ ನೀಡಿದರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನಡ ಗ್ರಾಮದ ಲೀಲಾವತಿ ಇವರಿಗೆ ನಾವೂರು ಕುಲಾಲ ಯುವ ವೇದಿಕೆಯಿಂದ ರೂ. ೫ ಸಾವಿರ ಧನಸಹಾಯವನ್ನು ಅಧ್ಯಕ್ಷ ರಾಜ ಕುಮಾರ ಲಾಲ ಮತ್ತು ಸದಸ್ಯರು ಹಸ್ತಾಂತರಿಸಿದರು.