ತಾಲೂಕು ಸುದ್ದಿ

ನಾವೂರು ದೇವಸ್ಥಾನದಲ್ಲಿ ಧನು ಪೂಜೆ-ವಿಷ್ಣು ಸಹಸ್ರ ನಾಮ ಪಠಣ ಸಂಪನ್ನ

ನಾವೂರು ಶ್ರೀ ಗೋಪಾಲಕೃಷ್ಣ ದೇವಾಸ್ಥಾನದಲ್ಲಿ ಧನುಪೂಜೆ-ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣ ಸಂಪನ್ನ


ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ *ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ (ರಿ) ನಾವೂರು* ಇದರ ಆಶ್ರಯದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ *ಧನುಪೂಜೆ ಹಾಗೂ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ* ಜ.14ರಂದುಸಂಪನ್ನಗೊಂಡಿತು.
ಇಂದಿನ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರಾಗಿರುವ *ಡಾ. ಎಲ್ ಎಚ್ ಮಂಜುನಾಥ್*, ಮಂಗಳೂರಿನ ಉದ್ಯಮಿಗಳಾಗಿರುವ ಶ್ರೀಮತಿ ಮತ್ತು ಶ್ರೀ ಮಾಧವ ಜೋಗಿತ್ತಾಯ, ಉಜಿರೆಯ ದಂತ ವೈದ್ಯರಾಗಿರುವ ಡಾ. ಎಂ ಎಂ ದಯಾಕರ್, ಪೂನಾದಲ್ಲಿ ಉದ್ಯಮಿಗಳಾಗಿರುವ ಸುಬ್ರಹ್ಮಣ್ಯ ಭಟ್ ಮತ್ತು ಮನೆಯವರು, ಬೆಂಗಳೂರಿನ ಮಮತಾ ಅಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ. ಸುಮಂತ ಹೆಗ್ಡೆ ಮತ್ತು ಮನೆಯವರು, ಆಳ್ವಾಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ರಾಗಿರುವ ಡಾ. ಅನಿಲ್ ಕುಮಾರ್ ರೈ ಮತ್ತು ಡಾ. ಪ್ರಸನ್ನ ಐತಾಳ್, ಉಜಿರೆ ಶ್ರೀ ಧ ಮ ಕಾಲೇಜಿನ ಕಂಪ್ಯೂಟರ್

ಪ್ರಾಧ್ಯಾಪಕರಾಗಿರುವ ಕೇಶವ ಪೈ, ಬಿ ಎಸ್ ಎನ್ ಎಲ್ ನ ನಿವೃತ್ತ ಇಂಜಿನಿಯರ್ ಆಗಿರುವ ಶ್ರೀಮತಿ ಮತ್ತು ಶ್ರೀ ಅಣ್ಣಿ ಪೂಜಾರಿ, ಸಿಂಡಿಕೇಟ್ ಬ್ಯಾಂಕ್ ನ ನಿವೃತ ಹಿರಿಯ ಪ್ರಬಂಧಕರಾದ ಸೂರ್ಯನಾರಾಯಣ ಭಟ್ ಬೊಳಿಯ೦ಜಿ, ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಜೊತೆ ಕಾರ್ಯದರ್ಶಿ ಯಾಗಿರುವ ಶ್ರೀನಾಥ್, ಬೆಳ್ತಂಗಡಿಯ ಉದ್ಯಮಿಗಳಾದ ವಸಂತ ಜೈನ್ ಮತ್ತು ಪ್ರದೀಪ್ ವಿ ಜಿ ಮನೆಯವರು, ಗುರುವಾಯನಕೆರೆ ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಜಗನ್ನಾಥ್ ಮತ್ತು ಮನೆಯವರು ಆಗಮಿಸಿದ್ದರು.

ನಂತರ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು *ಡಾ. ಎಲ್ ಎಚ್ ಮಂಜುನಾಥ್* ರವರು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆ ಗೊಳಿಸಿ *ವಿಷ್ಣು ಸಹಸ್ರನಾಮ ಪಠಣದ* ಮಹತ್ವ ಮತ್ತು ಇಂದಿನ ಕಾಲಕ್ಕೆ ಅದರ ಪ್ರಸ್ತುತತೆಯನ್ನು ಬಹಳ ಸುಂದರವಾಗಿ ಜನರಿಗೆ ತಿಳಿಸಿಕೊಟ್ಟರು. ಈಗಿನ ಡಿಜಿಟಲ್ ಯುಗದಲ್ಲಿ *ಗೂಗಲ್ ಮೀಟ್* ಅನ್ನು ಧಾರ್ಮಿಕ ಕೆಲಸಗಳಿಗೆ ಬಳಸಿಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧನುರ್ಪೂಜಾ ಅಂತಿಮ ದಿನದ ಈ ವಿಶೇಷ ಸಂದರ್ಭದಲ್ಲಿ ಕೊಲ್ಲಿಯ *ಶ್ರೀಧರ ಪೂಜಾರಿ ಮತ್ತು ಬಳಗದವರು* ಸ್ಯಾಕ್ಸೋಫೋನ್ ವಾದನವನ್ನು ನಡೆಸಿಕೊಟ್ಟರು. ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶ ವಿದೇಶಗಳ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅದರಲ್ಲೂ ನಿರಂತರವಾಗಿ ಮೂವತ್ತು ದಿನವೂ ಬಹಳಷ್ಟು ಭಕ್ತರು ಅಂತರ್ಜಾಲದ ಮೂಲಕವೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಶ್ರೀಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಇದರ ಉಪಾಧ್ಯಕ್ಷರಾಗಿರುವ ಗಣೇಶ್ ಕಣಾಲ್, ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಕಾರಿಂಜ, ಕಾರ್ಯದರ್ಶಿಗಳಾದ ಗಣೇಶ್ ಗೌಡ ನೆಲ್ಲಿಪಲ್ಕೆ, ಟ್ರಸ್ಟಿಗಳಾದ ಧರ್ಣಪ್ಪ ಮೂಲ್ಯ ಕಾಯರ್ದಡಿ, ಹರೀಶ್ ಸಾಲ್ಯಾನ್ ಮೊರ್ತಾಜೆ, ತಿಮ್ಮಪ್ಪ ಜಿ ಇವರು ಉಪಸ್ಥಿತರಿದ್ದರು.

ದೇವಸ್ಥಾನದ ಪ್ರಧಾನ ಅರ್ಚಕರಾದ *ವೇದಮೂರ್ತಿ ಅಶ್ವಿನಿ ಭಟ್* ಇವರು ವೈದಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ *ಹರೀಶ್ ಕಾರಿಂಜ* ಇವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಜಾತ್ರಾ ಸಮಿತಿಯ ಅಧ್ಯಕ್ಷರಾಗಿರುವ *ಡಾ ಪ್ರದೀಪ್ ಎ* ಇವರು ಸಾಮೂಹಿಕ *ವಿಷ್ಣು ಸಹಸ್ರನಾಮ ಪಠಣವನ್ನು* ನಡೆಸಿಕೊಟ್ಟರು.
ಜ31ಮತ್ತು ಫೆ.1ರಂನಾದು *ಧರ್ಮಸ್ಥಳದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ* ಶುಭಾಶೀರ್ವಾದಗಳೊಂದಿಗೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ *ವಿಜಯರಾಘವ ಪಡ್ವೆಟ್ನಾಯ* ರವರ ಗೌರವಾಧ್ಯಕ್ಷತೆಯಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ ಮತ್ತು ಪ್ರತಿಷ್ಠಾ ವರ್ಧಂತಿ ಉತ್ಸವ ಕಾರ್ಯಕ್ರಮವನ್ನು ಎಲ್ಲರೂ ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಟ್ರಸ್ಟ್ ನ ಅಧ್ಯಕ್ಷರಾದ *ಎ ಬಿ ಉಮೇಶ್* ಅವರು ವಿನಂತಿಸಿಕೊಂಡರು.

ನಿಮ್ಮದೊಂದು ಉತ್ತರ