ತಾಲೂಕು ಸುದ್ದಿರಾಜ್ಯ ವಾರ್ತೆ

ಶ್ರೀ ರಾಮ ಮಂದಿರ ನಿಮಾ೯ಣಕ್ಕೆ ಧಮ೯ಸ್ಥಳದಿಂದ ರೂ.25 ಲಕ್ಷ ದೇಣಿಗೆ

ಶ್ರೀ ರಾಮ ಮಂದಿರ ನಿರ್ಮಾಣಕ್ಕೆ
ಡಾ.ಹೆಗ್ಗಡೆಯವರಿಂದ 25 ಲಕ್ಷ ರೂ. ನಿಧಿ ಸಮರ್ಪಣೆ

ಬೆಳ್ತಂಗಡಿ: ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಧರ್ಮಸ್ಥಳದಲ್ಲಿ ನಡೆದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿಧಿ ಸರ್ಮಪಣಾ ಅಭಿಯಾನ ಕಾಯ೯ಕ್ರಮದಲ್ಲಿ
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 25 ಲಕ್ಚ ರೂ. ನೀಡುವುದಾಗಿ ಘೋಷಿಸಿದರು.

ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಜ.13 ರಂದು ನಿಧಿ ಸಮರ್ಪಣಾ ಅಭಿಯಾನದ ಗಣ್ಯರ ಸಭೆಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಾಸುದೇವನಿಗೂ ವಾಮದೇವನಿಗೂ ಸುಮದ ವ್ಯತ್ಯಾಸ ಎಂಬಂತೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ ರಾಮಸ್ಮರಣೆಯಾಗಿದೆ. ಎಲ್ಲರ ದೃಷ್ಟಿ ರಾಮಜನ್ಮಭೂಮಿ ಮೇಲಿದೆ. ಹಲವು ವರ್ಷಗಳ ವ್ಯಾಜ್ಯ ಇತ್ಯರ್ಥಗೊಂಡು ಸಂಶಯ ಸಂದೇಹವಿಲ್ಲದೆ ಈ ಬಾರಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಶತಶತಮಾನಗಳ ಭವ್ಯ ರಾಮ ಮಂದಿರವಾಗಬೇಕೆಂಬ ಕನಸ್ಸು ಇಂದು ನನಸಾಗುವ ಸುದೈವ. ಮಂದಿರ ನಿರ್ಮಾಣ ಒಬ್ಬಿಬ್ಬರಿಂದ ಆಗಬಾರದು ಸರ್ವ ರಾಮ ಭಕ್ತರ ಸಹಭಾಗಿತ್ವದಲ್ಲಿ ದನಸಮರ್ಪಣೆಯಾಗುವುದರೊಮದಿಗೆ ರಾಮರಾಜ್ಯವಾಗಿಸುವ ಸಂಕಲ್ಪ ನಮ್ಮದು ಎಂದರು.

ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್, ಅಭಿಯಾನದ ರಾಜ್ಯ ಸಮಿತಿ ಸದಸ್ಯ ವಿವೇಕ್ ಆಳ್ವ, ವಿಹಿಂಪ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್, ತಾಲೂಕು ಸಂಘ ಚಾಲಕ್ ವಿನಯಚಂದ್ರ, ಗಣೇಶ್ ಭಟ್, ಶಾಸಕ ಹರೀಶ್ ಪೂಂಜ, ಪ್ರಾಂತ ವಿಭಾಗ ಕಾರ್ಯದರ್ಶಿ ಶರಣ್ ಪಂಪರ್ವೆಲ್, ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ