ನಾಳ : ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ ಪ್ರಯುಕ್ತ `ಯಕ್ಷಗಾನ ತಾಳಮದ್ದಳೆ ಹಾಗೂ ಹಿರಿಯ ಕಲಾವಿದರಿಗೆ ಗೌರವ ವಂದನೆ’ ಕಾರ್ಯಕ್ರಮ ಅ.೧೯ ರಂದು ನಡೆಯಿತು.
ಶ್ರೀ ಅನುಗ್ರಹ ಪಾರೆಂಕಿ ಸಂಯೋಜನೆಯಲ್ಲಿ ವಿವಿಧ ಯಕ್ಷಗಾನ ಸಂಘದ ಹವ್ಯಾಸಿ ಕಲಾವಿದರ ಸಹಯೋಗದೊಂದಿಗೆ “ಶ್ರೀ ದೇವಿ ಕೌಶಿಕೆ” ಎಂಬ ಯಕ್ಷಗಾಳ ತಾಳಮದ್ದಳೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ನಾಳ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.
ರಾಘವೇಂದ್ರ ಅಸ್ರಣ್ಣ, ಹಿರಿಯ ಕಲಾವಿದರಾದ ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಗೋಪಾಲ ಶೆಟ್ಟಿ ಕಳೆಂಜ ಇವರನ್ನು ಸನ್ಮಾನಿಸಲಾಯಿತು. ಕಿಶೋರ್ ಶೆಟ್ಟಿ ಮೂಡಯೂರು, ಪದ್ಮನಾಭ ಕುಲಾಲ್ ಇಳಂತಿಲ, ಡಿ.ಕೆ ಆಚಾರ್ಯ ಹಳೇನೆರೆಂಕಿ, ಗಣೇಶ್ ಸಾಲ್ಯಾನ್, ಭಾಸ್ಕರ ಶೆಟ್ಟಿ ಮಧ್ವ, ದಿವಾಕರ ಆಚಾರ್ಯ ಗೇರುಕಟ್ಟೆ ಇವರನ್ನು ಗೌರವಿಸಿ, ರಾಘವ ಹೆಚ್. ಗೇರುಕಟ್ಟೆ, ಸುರೇಶ ಶೆಟ್ಟಿ ಪೂಂಜಾಲಕಟ್ಟೆ, ಶ್ರೀ ಪತಿ ಭಟ್ ಉಪ್ಪಿನಂಗಡಿ, ಮೋಹನ್ ಶರವೂರು, ದಿವಾಕರ ಆಚಾರ್ಯ ಹಳೆನೇರೆಂಕಿ ಮತ್ತು ನಾಗೇಶ್ ಮಾರ್ತಾಜೆ ಯವರನ್ನು ಗುರುತಿಸಲಾಯಿತು.ಸಂಯೋಜಕ ಎ.ಸಂಜೀವ ಪಾರೆಂಕಿ ಪ್ರಸ್ತಾವನೆ ಮಾಡಿ , ಸ್ವಾಗತಿಸಿದರು.