ಕ್ರೈಂ ವಾರ್ತೆಗ್ರಾಮಾಂತರ ಸುದ್ದಿಜಿಲ್ಲಾ ವಾರ್ತೆತಾಲೂಕು ಸುದ್ದಿನಿಧನ ಸುದ್ದಿರಾಜ್ಯ ವಾರ್ತೆಸಾಧಕರು

ಹೀಗೆ ಯಾಕೆ ಬಣ್ಣವನ್ನ ವಿಗ್ರಹಕ್ಕೆ ಲೇಪಿಸಿದ್ದಾರೆ ಅಂತ ಎಂದಾದರೂ ಯೋಚಿಸಿದ್ದೀರಾ?

ಹನುಮಂತ ರಾಮನ ಪಾದಸೇವಕ. ಹಾಗಾಗಿ ಹನುಮಂತನ ದೇವಾಲಯದಲ್ಲಿ ರಾಮಾ ಲಕ್ಷ್ಮಣ ಸಹಿತ ಸೀತಾದೇವಿಯಿರುವ ಪುಟ್ಟ ಗುಡಿಯಾಗಲಿ ಅಥವಾ ವಿಗ್ರಹವಾಗಲಿ ಇಟ್ಟು ಪೂಜಿಸುತ್ತಾರೆ. ಹನುಮಂತನನ್ನು ಭಕ್ತಿ, ನಂಬಿಕೆ, ಶೌರ್ಯ ಮತ್ತು ನಿಸ್ವಾರ್ಥ ಪ್ರೀತಿಯ ಸಾರಾಂಶವೆಂದು ಗುರುತಿಸಲಾಗಿದೆ. ಇದು ಒಂದು ವಿಶೇಷವಾದರೆ ಹನುಮಂತನ ವಿಗ್ರಹಕ್ಕೆ ಕೆಂಪು ಮಿಶ್ರಿತ ಕೇಸರಿ ಬಣ್ಣವನ್ನು ಲೇಪಿಸಿರುತ್ತಾರೆ. ಇದನ್ನ ಭಂಡಾರ ಅಂತ ಕೂಡ ಕರೆಯುತ್ತಾರೆ. ಆದರೆ ಹೀಗೆ ಯಾಕೆ ಬಣ್ಣವನ್ನ ವಿಗ್ರಹಕ್ಕೆ ಲೇಪಿಸಿದ್ದಾರೆ ಅಂತ ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆ ಒಂದು ಕಥೆಯೇ ಇದೆ.

ವನವಾಸದಲ್ಲಿದ್ದಾಗ, ಒಂದು ದಿನ ಸೀತೆ ತನ್ನ ಹಣೆಯ ಮೇಲೆ ಸಿಂಧೂರವನ್ನು ಹಚ್ಚುವುದನ್ನು ಹನುಮಂತ ನೋಡಿದ. ಹನುಮಂತ ಇದನ್ನು ನೋಡಿ ಕುತೂಹಲದಿಂದ ಸೀತೆಯನ್ನು ಕೇಳುತ್ತಾನೆ. “ಇದೇನು ತಾಯಿ. ಅದನ್ನು ಏಕೆ ಹಣೆಯ ಮೇಲೆ ಇಡುತ್ತಿದ್ದೀಯಾ?” ಎಂದು ಕೇಳಿದ. ಇದನ್ನು ಲೇಪಿಸುವುದರಿಂದ ತನ್ನ ಗಂಡ ರಾಮ ಧೀರ್ಘಾಯುಷಿಯಾಗುತ್ತಾನೆ ಎಂದು ಸೀತೆ ಆತನಿಗೆ ಹೇಳುತ್ತಾಳೆ.

ನಿಮ್ಮದೊಂದು ಉತ್ತರ