ಬೆಳ್ತಂಗಡಿ: ಕೊರೊನಾ ಎರಡನೇ ಅಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಲಾಕ್ ಡೌನ್ ಮತ್ತು ನೈಟ್ ಕರ್ಪ್ಯೂ ವಿಧಿಸಿ ಒಂದು ವಾರದ ಕೆಳಗೆ ಆದೇಶ ಹೊರಡಿಸಿತ್ತು. ಆದರೆ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 14 ದಿನಗಳ ಕಾಲ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತಜ್ಞರು ಮತ್ತು ಆರೋಗ್ಯ ಸಚಿವರ ಸಲಹೆ ಪಡೆದ ಮುಖ್ಯಮಂತ್ರಿಗಳು 14 ದಿನಗಳ ಕಾಲ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದು, ಈಗಲೇ
ರಾಜ್ಯದಲ್ಲಪರಿಷ್ಕೃತ ಮಾರ್ಗಸೂಚಿಗಳ ಅನ್ವಯ ನಾಳೆ ಸಂಜೆಯಿಂದ ರಾಜ್ಯದ್ಯಂತ ಲಾಕ್ ಡೌನ್ ಜಾರಿಯಾಗಲಿದೆ.ಒಂದು ವೇಳೆ 15 ದಿನ ಕಳೆದರೂ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರದಿದ್ದರೆ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವ ಉದ್ದೇಶದಿಂದ ಮತ್ತೆ ಒಂದು ವಾರಗಳ ಲಾಕ್ ಡೌನ್ ಅನ್ನು ಮುಂದುವರೆಸುವುದಾಗಿ ಹೇಳಲಾಗಿದ್ದು, ಅದಷ್ಟು ಬೇಗ ಮಾರ್ಗಸೂಚಿ ಪ್ರಕಟಿಸುವುದಾಗಿ ಸರ್ಕಾರ ತಿಳಿಸಿದೆ.ಇನ್ನು ಬೆಳಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತು ಖರೀದಿಗೆ ಅಂಗಡಿ ಮುಗ್ಗಟ್ಟಗಳು ತೆರದಿರಲಿದ್ದು, ಖರೀದಿಗೆ ಅವಕಾಶ ನೀಡಲಾಗಿದೆ.