ಜಿಲ್ಲಾ ವಾರ್ತೆರಾಜ್ಯ ವಾರ್ತೆ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಜೀರ್ಣೋದ್ದಾರಕ್ಕೆ ನಿಧಿ ಸಂಚಯನ.

ಮಂಗಳೂರು : ಸುಮಾರು 1500ವರ್ಷಗಳ ಇತಿಹಾಸ ಇರುವ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಕಲ್ಪಸಿಲಾಗಿದ್ದು ಶ್ರೀ ದೇವರ ಭಾವಚಿತ್ರ ಅನಾವರಣ,ಸಹಾಯಧನದ ಕೂಪನ್ ಬಿಡುಗಡೆ ಸಂದರ್ಭ ಪಾಲ್ಗೊಳ್ಳುವ ಅವಕಾಶ ಸಿಕ್ಕಿರುವುದು ನಮ್ಮಬದುಕಿನ ಪುಣ್ಯದ ಫಲ, ಈ ದೇವಸ್ಥಾನದ ಪುನರ್ ನವೀಕರಣಕ್ಕೆ ನಮ್ಮಿಂದ ಸಾಧ್ಯವಾಗುವ ಎಲ್ಲಾ ಸಹಕಾರಗಳನ್ನು ನೀಡಲು ಬದ್ಧನಾಗಿದ್ದೇನೆ ಎಂದು ಮಂಗಳೂರು ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.
*ಅವರು ಮಂಗಳೂರಿನ ಓಲ್ಡ್‍ಕೆಂಟ್ ರಸ್ತೆಯಲ್ಲಿರುವ ಶ್ರೀ ದೇವಿ ದೇವಸ್ಥಾನಕ್ಕೆ ಮಂಗಳೂರು ಮ.ನ.ಪಾ ಕೊಡಮಾಡಿರುವ ಮೇಲ್ಚಾವಣಿ ಉದ್ಘಾಟಿಸಿ, ಶ್ರೀ ವೀರನಾರಾಯಣ ದೇವರ ಭಾವಚಿತ್ರ ಅನಾವರಣಗೊಳಿಸಿ
*ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಆಯೋಜಿಸಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಈ ಸಂದರ್ಭ ಶಾಸಕರನ್ನು ಹಾಗೂ ಮಂಗಳೂರು ಮ.ನ.ಪಾ ಮೇಯರ್ ಪ್ರೇಮಾನಂದ ಶೆಟ್ಟಿ ಅವರನ್ನು ಗೌರವಿಸಲಾಯಿತು.
*ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ನಮ್ಮ ಕುಲದೇವರಾದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಇಡೀಯ ಸಮಾಜ ಮೊದಲ ಆದ್ಯತೆ ನೀಡಬೇಕಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ ಸಚಿವರ, ಶಾಸಕರ ಸಹಿತ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಕನಿಷ್ಠ ರೂ.2 ಕೋಟಿಯಾದರೂ `ನಿಧಿ’ ಪಡೆಯಲು ಅಹರ್ನಿಶಿ ಪ್ರಯತ್ನಿಸೋಣ ಎಂದರು.
*ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಅಧ್ಯಕ್ಷರ ಮಯೂರ್  ಉಳ್ಳಾಲ್ ಮಾತನಾಡಿ ಧಾರ್ಮಿಕ ಕ್ಷೇತ್ರದ ಜೀರ್ಣೋದ್ಧಾರದಿಂದ ಬಿಲ್ಲವ ಸಮಾಜ ಮಾಜಿ ಕೇಂದ್ರ ಸಚಿವವರಾದ* *ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಇಡೀಯ ದೇಶದ ಗಮನ ಸೆಳೆದಂತೆ ಕುಲಾಲ ಸಮಾಜವೂ ಕುಲದೇವರಾದ ಶ್ರೀ ವೀರನಾರಾಯಣನ ಸಾನಿಧ್ಯದ* *ನವೀಕರಣದಿಂದ ಎಲ್ಲಾ ರೀತಿಯ ಶಕ್ತಿಯನ್ನು ಪಡೆದುಕೊಂಡು ರಾಜಕೀಯ, ಸಾಮಾಜಿಕ ಎಲ್ಲಾ ರಂಗಗಳಲ್ಲೂ ಮುಂಚೂಣಿ ಪಡೆಯುವ ದಿನ ಸನ್ನಿಹಿತ ವಾಗಲಿದೆ ಎಂದರು*
*ಹಿರಿಯರಾದ ರಾಮಣ್ಣ ಉಪ್ಪಿನಂಗಡಿ, ಯಜ್ಞೇಶ್ವರ ಬರ್ಕೆ, ನ್ಯಾಯವಾದಿ ರಾಮ್ ಪ್ರಸಾದ್, ಆರ್ಥಿಕ ಸಲಹೆಗಾರರಾದ ಪುಂಡರೀಕಾಕ್ಷ ಕೈರಂಗಳ , ಶ್ರೀಮತಿ ರೂಪಾ.ಡಿ ಬಂಗೇರ, ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ, ಪುರುಷೋತ್ತಮ ಕುಲಾಲ್ ಕಲ್ಬಾವಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ದಾಮೋದರ್.ಎ. ಮಹೇಶ್ ಸವಣೂರು, ನ್ಯಾಯವಾದಿ ಕುಶಾಲಪ್ಪ ಕುಲಾಲ್, ಗಿರಿಧರ ಜೆ. ಮೂಲ್ಯ, ಪ್ರೇಮಾನಂದ ಕುಲಾಲ್, ಲ!ಅನಿಲ್‍ದಾಸ್, ಮಾತೃಸಂಘದ ಶ್ರೀಮತಿ ಪ್ರಮೀಳಾ ಸಾಲ್ಯಾನ್, ಜಯಶ್ರೀ, ಭಾಸ್ಕರ್* ಪೆರುವಾಯಿ ಮುಂತಾದವರು ವೇದಿಕೆಯಲ್ಲಿದ್ದರು.
ಪ್ರವೀಣ್ ಬಸ್ತಿ ಸ್ವಾಗತಿಸಿದರು. ನವೀನ್ ಕುಲಾಲ್ ನಿರೂಪಿಸಿದರು.

ನಿಮ್ಮದೊಂದು ಉತ್ತರ