ಗ್ರಾಮಾಂತರ ಸುದ್ದಿ

ಗುರುವಾಯನಕೆರೆ ಶಕ್ತಿನಗರದಲ್ಲಿ ಓಂ ಇಲೆಕ್ಟ್ರಿಕ್ ಸಂಸ್ಥೆ ಶುಭಾರಂಭ

ಗುರುವಾಯನಕೆರೆ ಶಕ್ತಿನಗರದಲ್ಲಿ ಓಂ ಇಲೆಕ್ಟ್ರಿಕ್
ನೂತನ ಸಂಸ್ಥೆಯ ಶುಭಾರಂಭ
ಗುರುವಾಯನಕೆರೆ: ಕುವೆಟ್ಟು ಗ್ರಾಮದ ಗುರುವಾಯನಕೆರೆ ಶಕ್ತಿನಗರದಲ್ಲಿ ಆರಂಭಗೊಂಡ ನೂತನ ಸಂಸ್ಥೆ `ಓಂ ಇಲೆಕ್ಟ್ರಿಕ್’ ಇದರ ಶುಭಾರಂಭವು ಎ.೨೬ರಂದು ಕೋವಿಡ್-19ನಿಯಮವನ್ನು ಪಾಲಿಸಿ ಸರಳವಾಗಿ ನಡೆಯಿತು.


ನೂತನ ಸಂಸ್ಥೆಯನ್ನು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿ, ಇಂದು ಆರಂಭಗೊಂಡ ಸಂಸ್ಥೆಯೂ ಈ ಭಾಗದ ಜನರ ಬೇಡಿಕೆಗಳನ್ನು ಈಡೇರಿಸಿ ಉನ್ನತ ಸ್ಥಾನಕ್ಕೇರಳಿ, ಸಂಸ್ಥೆ ಬೆಳಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಕ್ತಿನಗರ ನವಶಕ್ತಿ ಗ್ರೂಪ್‌ನ ಶಶಿಧರ ಶೆಟ್ಟಿ ಬರೋಡ ಅವರು ಮಾತನಾಡಿ ನೂತನ ಸಂಸ್ಥೆ ಬಹಳಷ್ಟು ಪ್ರಗತಿಯಾಲಿ, ಊರಿಗೆ ಮತ್ತು ಸಂಸ್ಥೆಗೆ ಹೆಚ್ಚಿನ ಕೀರ್ತಿ ಲಭಿಸಲಿ ಎಂದು ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಪ್ರಭಾಕರ ಬಂಗೇರ, ಎಕ್ಸೆಲ್ ಪಿಯು ಕಾಲೇಜಿನ ಮುಖ್ಯಸ್ಥ ಸುಮಂತ್ ಕುಮಾರ್ ಜೈನ್, ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಗಣ್ಯರಾದ ವೃಷಭರಾಜ ಜೈನ್, ಯುವರಾಜ ಜೈನ್ ಭಾಗವಹಿಸಿ ನೂತನ ಸಂಸ್ಥೆಗೆ ಶುಭ ಕೋರಿದರು.


ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾ.ಪಂ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಅರೆಮಲೆಬೆಟ್ಟ ದೈವಸ್ಥಾನದ ಆಡಳಿತದಾರ ಸುಕೇಶ್‌ಕುಮಾರ್ ಕಡಂಬು, ಪ್ರಮುಖರಾದ ಹರೀಶ್ ಶೆಟ್ಟಿ ಮಂಗಳೂರು, ವಿಠಲ ಶೆಟ್ಟಿ ಲಾಲ, ಪುರಂದರ ಶೆಟ್ಟಿ, ಶ್ರೀಮತಿ ಸುಮನ, ಶ್ರೀಮತಿ ಶೃತಿ, ಶ್ರವಣ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಪ್ರದೀಪ್ ಕುಮಾರ್ ಶೆಟ್ಟಿ ಆಗಮಿಸಿದ ಅತಿಥಿ-ಗಣ್ಯರನ್ನು ಬರಮಾಡಿಕೊಂಡರು. ಪುಂಜಾಲಕಟ್ಟೆ ಶಾಲಾ ಶಿಕ್ಷಕ ಧರಣೇಂದ್ರ ಕೆ. ಜೈನ್ ಕಾರ್ಯಕ್ರಮ ನಿರೂಪಿಸಿ, ಆನಂದ ಶೆಟ್ಟಿ ವಾತ್ಸಲ್ಯ ಧನ್ಯವಾದವಿತ್ತರು.

ನಿಮ್ಮದೊಂದು ಉತ್ತರ