ಗ್ರಾಮಾಂತರ ಸುದ್ದಿ

ಬೆಳ್ತಂಗಡಿ ನಗರ ಪೊಲೀಸ್ ರಿಂದ ಗೃಹ ರಕ್ಷಕ ಸಿಬಂದಿ ಚಿಕಿತ್ಸೆಗೆ ಆರ್ಥಿಕ ‘ಸಹಾಯ ಧನ ಹಸ್ತಾಂತರ

ಬೆಳ್ತಂಗಡಿ: ತಾಲೂಕಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಗೃಹರಕ್ಷಕ ಸಿಬಂದಿ ಪಣೆಕಜೆಯ ‘ಭಾಸ್ಕರ ಪೂಜಾರಿ ಅವರ ಮಗಳಾದ ಪವಿತ್ರಾ ಬಿ.(18ವ) ಅವರು ಮಿದುಳಿನ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗಾಗಿ ಬೆಳ್ತಂಗಡಿ ಸಂಚಾರಿ ಠಾಣೆ ಸಿಬಂದಿ ವತಿಯಿಂದ ರೂ.29,೦೦೦ ಆರ್ಥಿಕ ‘ಸಹಾಯ ಸಂಗ್ರಹಿಸಲಾಯಿತು.
ಪವಿತ್ರಾ ಅವರ ಮಿದುಳಿನ ರಕ್ತನಾಳದಲ್ಲಿ ರಕ್ತನಾಳದ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇದಕ್ಕಾಗಿ ಸಂಚಾರಿ ಪೊಲೀಸ್ ಠಾಣೆ ಸಿಬಂದಿ ಒಟ್ಟುಗೂಡಿಸಿದ ಮೊತ್ತವನ್ನು ಅವರ ತಂದೆ ‘ಭಾಸ್ಕರ ಪೂಜಾರಿ ಅವರಿಗೆ ಸಂಚಾರಿ ಠಾಣೆ ಉಪ ನಿರೀಕ್ಷಕ ಓಡಿಯಪ್ಪ ಗೌಡ ಅವರು ಹಸ್ತಾಂತರಿಸಿದರು.
ಅವರ ಪರಿಸ್ಥಿತಿ ಮನಗಂಡು ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಶಾಸಕ ವಸಂತ ಬಂಗೇರ ಅವರು ತಲಾ ರೂ. 1೦,೦೦೦ ‘ಧನ ಸಹಾಯ ಒದಗಿಸಿರುವುದಾಗಿ ಬೆಳ್ತಂಗಡಿ ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ