ಬೆಳ್ತಂಗಡಿ :.ಮಿತ್ತಬಾಗಿಲು ಗ್ರಾಮದ ಕೊಲ್ಲಿ ಶ್ರೀ ದುರ್ಗಾದೇವಿ.ದೇವಸ್ಥಾನದ ಹೊರಾಂಗಣದ ಬಾವಿಯನ್ನುಸ್ವಚ್ಛಗೊಳಿಸುವ ವೇಳೆ ಕಂಚಿನ ಅಥವಾ ಪಂಚಲೋಹದ ಮೂರ್ತಿಯೊಂದು ಪತ್ತೆಯಾಗಿದೆ.
ಕೊಲ್ಲಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾಮಗಾರಿನಡೆಯುತ್ತಿದ್ದು ಶ್ರಮದಾನದ ಮೂಲಕ ಎ.11ರಂದು ಬಾವಿಯನ್ನು ಸ್ವಚ್ಛಗೊಳಿ
ಸುತ್ತಿದ್ದಾಗ ಸುಮಾರು ಅರ್ಧ ಅಡಿ ಎತ್ತರ ಹಾಗೂ ಒಂದು ಕೆಜಿ ಯಷ್ಟು ತೂಕದ ಸಿಂಹದ ಮೇಲೆ ಕುಳಿತಿರುವ ದೇವಿಯ ಮೂರ್ತಿ ಕಂಡುಬಂದಿ
ದೆ. ಮೂರ್ತಿ ಯಾವುದೇ ರೀತಿಯಲ್ಲಿ ಭಿನ್ನಗೊಂಡಿ
ಲ್ಲ.ಈ ಬಾವಿಯನ್ನು ಸುಮಾರು ಹತ್ತು ವರ್ಷಗಳ ಬಳಿಕ ಸ್ವಚ್ಛಗೊಳಿಸಲಾಗಿದೆ. ಪರಿಸರದಲ್ಲಿ ಪಿಲಿಚಾಮುಂಡಿ ದೈವದ ಸ್ಥಾನ
ವಿದ್ದು,ಇದು ಪಿಲಿ ಚಾಮುಂಡಿಗೆ ಸಂಬಂಧ
ಪಟ್ಟಿರುವ ಸಾಧ್ಯತೆ ಇದೆ ಎಂಬ ಜಿಜ್ಞಾಸೆಯು ಮೂಡಿದೆ. ಆದರೆ ಇದುವರೆಗೆ ದೇವ
ಸ್ಥಾನದಿಂದ ಅಥವಾ ದೈವಸ್ಥಾನದಿಂದ ಯಾವುದೇ ಮೂರ್ತಿಕಾಣೆಯಾಗಿಲ್ಲ.
ಯಾರಾದರೂ ವ್ಯಕ್ತಿಗಳು ಈ ಮೂರ್ತಿಗೆ ಸಲ್ಲಬೇಕಾದ ಕೈಂಕರ್ಯಗಳನ್ನು ನೆರವೇರಿಸಿ ಬಾವಿಗೆ ತಂದು ಹಾಕಿರುವ ಸಾಧ್ಯತೆ ಇದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯು ಅಭಿಪ್ರಾಯಪಟ್ಟಿದೆ. ಮೂರ್ತಿಯನ್ನು ದೇವ
ಸ್ಥಾನದ ಕಚೇರಿಯಲ್ಲಿ ಇಡಲಾಗಿದೆ.