ಬೆಳ್ತಂಗಡಿ: ಮದ್ದಡ್ಕ ನಿವಾಸಿ ಉದ್ಯಮಿ ಯೋವ೯ರು ನಾಪತ್ತೆ ಯಾಗಿ ಒಂದೆರಡು ದಿನಗಳು ಕಳೆಯುತ್ತಿದ್ದಂತೆ ಇದೀಗ ಕುವೆಟ್ಟು ಗ್ರಾ ಮದ ಪೆರಿಯೋಳ್ ನಿವಾಸಿ ಅಬ್ಬಸ್ ರವರ ಪುತ್ರ ಕೆಂಪುಕಲ್ಲು ಸಾಗಾಟದ ಲಾರಿ ಚಾಲಕ ಅಬ್ದುಲ್ ರವೂಫ್ (25ವ) ಅವರು ನಾಪತ್ತೆಯಾಗಿದ್ದ ದರೆಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮಾ.4ರಂದು ಮಂಗಳೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಇವರು ಮನೆಗೆ ಬಾರದೇ, ಪತ್ನಿ ಮನೇಗೂ ಹೋಗದೆ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಸುಚಾಫ್ ಆಗಿದೆ. ಎಂದು ಅವರ ತಾಯಿ ಅಪ್ಸ ಪೊಲೀಸ್ ರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಮದ್ದಡ್ಕ ನಿವಾಸಿ ಉದ್ಯಮಿ ಚಿನ್ನೂ ಫಾಸ್ಟ್ ಪುಡ್ ನ ಮಾಲಕ ಅಬ್ದುಲ್ ರಹಿಂ ನಾಪತ್ತೆ ಯಾಗಿರುವುದನ್ನು ನೆನೆಪಿಸಬಹುದು.