ಗ್ರಾಮಾಂತರ ಸುದ್ದಿ

ಎರ್ನೋಡಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ

ಎರ್ನೋಡಿ ಜಾತ್ರೆ ಆಮಂತ್ರಣ ಪತ್ರಿಕೆ ಬಿಡುಗಡೆ

ಉಜಿರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಶ್ರೀ ಕ್ಷೇತ್ರ ಎರ್ನೋಡಿ ಉಜಿರೆ, ಇದರ ೨೦೨೧ ರ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಫೆ.೨೮ ರಂದು ಕ್ಷೇತ್ರದ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ದೈವದ ಸೇವಾಕರ್ತರಿಗೆ ವೀಳ್ಯ ನೀಡಲಾಯಿತು. ಹಾಗೂ ಸಂಕ್ರಮಣದ ಅಗೇಲು ಸೇವೆಯ ಅಡುಗೆ ಕೆಲಸಕ್ಕಾಗಿ ಶ್ರೀಮತಿ ಗೀತಾ ನಾಗೇಶ್ ಕಾಶಿಬೆಟ್ಟು ಇವರು ದೈವಸ್ಥಾನಕ್ಕೆ ಕೊಡುಗೆಯಾಗಿ ಗ್ರೈಂಡರ್ ನೀಡಿದರು. ಸಭೆಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಯು.ಬಾಬು ಮೊಗೇರ ಎರ್ನೋಡಿ, ಪಾಂಡುರಂಗ ಭಂಡಾರ್ಕರ್, ಕೆ.ಜಯಂತ ಶೆಟ್ಟಿ ಕುಂಟಿನಿ, ಬಿ.ಕೆ.ಗೋವಿಂದ, ಸಂಜೀವ ಶೆಟ್ಟಿ ಕುಂಟಿನಿ, ವಿಶ್ವನಾಥ ಶೆಟ್ಟಿ, ಲೋಕಯ್ಯ ನೇಕಾರ, ನಾಗೇಶ್ ಮತ್ತು ಗೀತಾ ಕಾಶಿಬೆಟ್ಟು, ಶ್ರೀಮತಿ ವನಿತಾ ಕಾಶಿಬೆಟ್ಟು, ದಿನೇಶ್ ಗೌಡ , ಅಶೋಕ್ ಆಚಾರ್ಯ, ಅಮ್ಮು ಮೊಗೇರ ಎರ್ನೋಡಿ, ನೋಣಯ್ಯ ಪುಂಜಾಲಕಟ್ಟೆ, ಆನಂದ್ ಎರ್ನೋಡಿ, ವೆಂಕಪ್ಪ ಕನ್ಯಾಡಿ, ರಮೇಶ್ ಪಜಿರಡ್ಕ, ಪ್ರದೀಪ್ ಕುಮಾರ್ ಎರ್ನೋಡಿ, ಆನಂದ್ ಎಸ್. ಗುರಿಪಳ್ಳ, ಗೋವಿಂದ ಕೊಯ್ಯುರು, ಸೃಜನ್ , ಬಾಬು ಕನ್ಯಾಡಿ, ಮೋಹನ ಕುಂಟಿನಿ, ಸದಾನಂದ ಕುಂಟಿನಿ, ದಿಲೀಪ್ ಕುಮಾರ್ ಎರ್ನೋಡಿ, ದೀಕ್ಷಿತ್ ಎರ್ನೋಡಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ