ಗ್ರಾಮಾಂತರ ಸುದ್ದಿ

ದಿಡುಪೆ: ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ

ಮಲವಂತಿಗೆ: ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಗ್ರಾ.ಪಂ ಮಲವಂತಿಗೆ ಮತ್ತು ಶ್ರೀ ಕ್ಷೇ.ಧ.ಗ್ರಾ ಯೋಜನೆ, ನೇತ್ರಾವತಿ ಕಿನಾರೆ ಕ್ರೀಡಾ ಸಂಘ, ಅನುಗ್ರಹ ಜನ ಸೇವಾ ಕೇಂದ್ರ ಇವರ ಸಹಯೋಗದೊಂದಿಗೆ ನಾಗರಿಕರಿಗೆ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ಸ್ಥಳದಲ್ಲಿಯೇ ಕಾರ್ಡ್ ವಿತರಣೆ ಶಿಬಿರ ಫೆ.೪ ರಂದು ದಿಡುಪೆ ಶಾಲೆಯಲ್ಲಿ ಜರುಗಿತು.


ಮಲವಂತಿಗೆ ಗ್ರಾ.ಪಂ ಸಿಬ್ಬಂದಿ ಪೂವಪ್ಪ ಹಾಗೂ ನೆಹರು ಯುವ ಕೇಂದ್ರ ತಾಲೂಕು ಸಂಯೋಜಕ ತೀಕ್ಷಿತ್ ಕುಮಾರ್ ದಿಡುಪೆ ಇವರು ಸರ್ಕಾರದ ಯೋಜನೆ ಪ್ರತಿಯೊಬ್ಬ ವ್ಯಕ್ತಿಗಳಿಗೆ ತಲುಪುವಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು. ಅನುಗ್ರಹ ಜನ ಸೇವಾ ಕೇಂದ್ರದ ಮಾಲಕ ತಲ್ಹತ್, ಗ್ರಾ.ಪಂ ಸದಸ್ಯರಾದ ದಿನೇಶ್ ಗೌಡ ಕಜಕ್ಕೆ, ಸುಂದರ ಪೂಜಾರಿ, ಶ್ರೀಮತಿ ರೋಹಿಣಿ ಜಯವರ್ಮ ಗೌಡ ಕಲ್ಬೆಟ್ಟು, ಶ್ರೀಮತಿ ಪವಿತ್ರ ನಾರಾಯಣ ಪೂಜಾರಿ ಉಪಸ್ಥಿತರಿದ್ದರು. ದಿನೇಶ್ ಗೌಡ ಕಜಕ್ಕೆ ಸ್ವಾಗತಿಸಿ, ಯೋಜನೆಯ ಸೇವಾ ಪ್ರತಿನಿಧಿ ವರಲಕ್ಷ್ಮೀ ಧನ್ಯವಾದವಿತ್ತರು.

ನಿಮ್ಮದೊಂದು ಉತ್ತರ