ಗ್ರಾಮಾಂತರ ಸುದ್ದಿ

ಶ್ರೀ ಆದಿನಾಗಬ್ರಹ್ಮ ಮೊಗೇಕ೯ಳ ದೈವಸ್ಥಾನ ಎನೋ೯ಡಿ: ಜಾತ್ರ ಮಹೋತ್ಸವ ಸಮಾಲೋಚನಾ ಸಭೆ

ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಶ್ರೀ ಕ್ಷೇತ್ರ ಏರ್ನೋಡಿ ಉಜಿರೆ, ಇದರ 2021 ರ ವಾರ್ಷಿಕ ಜಾತ್ರಾ ಜಂಟಿ ಸಭೆಯು ಜ.24 ರಂದು ಕ್ಷೇತ್ರದ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಈ ವರ್ಷದ ಜಾತ್ರೆ ಹಾಗೂ ನೇಮೋತ್ಸವವನ್ನು ಪ್ರತೀ ವರ್ಷದಂತೆ ನಡೆಸುವುದೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಯು.ಬಾಬು ಮೊಗೇರ ಏರ್ನೋಡಿ, ಕೆ.ಜಯಂತ ಶೆಟ್ಟಿ ಕುಂಟಿನಿ, ಮೋಹನ್ ಶೆಟ್ಟಿಗಾರ್ ಉಜಿರೆ, ಬಿ.ಕೆ.ಗೋವಿಂದ, ಸಂಜೀವ ಶೆಟ್ಟಿ ಕುಂಟಿನಿ, ಅಮ್ಮು ಮೊಗೇರ ಏರ್ನೋಡಿ, ಪೂವಯ್ಯ ಗೌಡ ಕೆನೆರಾ, ವಿಶ್ವನಾಥ ಶೆಟ್ಟಿ, ಗೋಪಾಲ್ ಮಾಸ್ಟರ್, ಪ್ರದೀಪ್ ಕುಮಾರ್, ಶೇಖರ ಪೇರಲ್ದಪಲಿಕೆ, ಟಿ.ಬಾಬು ತುಂಬೆದೊಟ್ಟು, ದಿಲೀಪ್ ಕುಮಾರ್, ಕೃಷ್ಣಪ್ಪ ಪಾರ, ದೀಕ್ಷಿತ್, ಸುಂದರ, ಅಮುನ ಬಡೆಕೊಟ್ಟು ಉಪಸ್ಥಿತರಿದ್ದರು.
ಸಭೆಯಲ್ಲಿ ಇತ್ತೀಚೆಗೆ ನಿಧನ ಹೊಂದಿದ ಬಾಲಕೃಷ್ಣ ಕೆದಿಲ್ಲಾಯ ಮತ್ತು ರಾಜೇಂದ್ರ ಕಾಮತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗೋಪಾಲ್ ಮಾಸ್ಟರ್ ಸ್ವಾಗತಿಸಿ, ಸಂಜೀವ ಶೆಟ್ಟಿ ಇವರು ವಂದಿಸಿದರು.

ನಿಮ್ಮದೊಂದು ಉತ್ತರ