ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಾಗಾರ ಸಂಪನ್ನ
ಮಾಚಾರು: ರಬ್ಬರ್ ಮಂಡಳಿ ಪ್ರಾದೇಶಿಕ ಕಛೇರಿ, ಬಿ.ಎಂ.ಎಸ್ ಸಂಯೋಜಿತ ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘ ಬೆಳ್ತಂಗಡಿ ಇದರ ಅಶ್ರಯದಲ್ಲಿ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಾಗಾರದ ಸಮಾರೋಪ ಮಾಚಾರು ಶಶಿಧರ ಭಟ್ರವರ ಮನೆ ವಠಾರದಲ್ಲಿ ಜರುಗಿತು
ರಬ್ಬರ್ ಮಂಡಳಿ ಪ್ರಾದೇಶಿಕ ಕಛೇರಿಯ ಸಹಾಯಕ ಅಯುಕ್ತ ಬಾಲಕೃಷ್ಣ ರಬ್ಬರ್ ಮರಗಳ ಕಾಳಜಿ ಹಾಗೂ ತರಬೇತಿ ಅವಶ್ಯಕತೆ ಮತ್ತು ರಬ್ಬರ್ ಮಂಡಳಿಯಲ್ಲಿ ಕಾರ್ಮಿಕರಿಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕಿನ ಪ್ರಭಾರ ರಬ್ಬರ್ ಬೆಳೆ ಅಭಿವೃದ್ದಿ ಅಧಿಕಾರಿ ಜೋಯ್ ಜೋನ್ ಮಂಡಳಿಯಿಂದ ತರಬೇತಿ ಪಡೆದ ಕಾರ್ಮಿಕರು ಕೆಲಸದಲ್ಲಿ ಶಿಸ್ತು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಬಿ.ಎಂ.ಎಸ್ ತಾಲೂಕು ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಕಾನರ್ಪರವರು ಸರಕಾರದ ಸೌಲಭ್ಯಗಳು ಹಾಗೂ ಜೀವನ ಭದ್ರತೆ ಯೋಜನೆಗಳ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತರಬೇತಿ ನೀಡಿದ ರಬ್ಬರ್ ಮಂಡಳಿಯ ನಿವೃತ್ತ ಅಧಿಕಾರಿ ರಾಘವನ್ರನ್ನು ಸನ್ಮಾನಿಸಲಾಯಿತು. ತರಬೇತಿ ಪಡೆದ ಕಾರ್ಮಿಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಶಶಿಧರ್ ಭಟ್ ಮಾಚಾರು ವಹಿಸಿದ್ದರು. ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ದಯಾನಂದ್ ಉಪಸ್ಥಿತರಿದ್ದರು.
ಭುವನೇಶ್ವರ ಕಾರ್ಯಕ್ರಮ ನಿರೂಪಿಸಿದರು ,ಪಧಾದಿಕಾರಿಗಳಾದ ನಾಗರಾಜು ಮಾಚಾರು ಸೆಂಥಿಲ್ ಕುಮಾರ್,ರಾಜಾ ಮಾಚಾರು,ಅಜಿತ್ ಕುಮಾರ್ ಕಿನ್ಯಾಜೆ, ರಘುಪತಿ ತೋಡಿಕಾನ ,ಚಂದ್ರ ಮಂಜೊಟ್ಟಿ, ವಿನಯ ಚಂದ್ರ ಉಪಸ್ಥಿತರಿದ್ದರು.