ಮೂರು ಜವಾಬ್ದಾರಿಯನ್ನು ಹೊತ್ತು ಜನರ ಸೇವೆ ಮಾಡುತ್ತಿರುವ ಏಕೈಕ ಡಾಕ್ಟರ್
ಬೆಳ್ತಂಗಡಿ: ದ. ಕ ಜಿಲ್ಲಾ ಆಕ್ಸಿಜನ್ ಟಾಸ್ಕ್ ಪೋಸ್೯ ಸಮಿತಿ ಸಂಚಾಲಕರಾಗಿ ಮಂಗಳೂರು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸದಸ್ಯ ಡಾ.ಅಣ್ಣಯ್ಯ ಕುಲಾಲ್ ನೇಮಕ ಗೊಂಡಿದ್ದಾರೆ.
ಇದಲ್ಲದೆ ದ.ಕ ಜಿಲ್ಲಾ ಆರೋಗ್ಯಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಕೋವಿಡ್ ಮರಣದ ತನಿಖಾ ತಂಡದ ಸದಸ್ಯರಾಗಿಯೂ ಇವರು ಆಯ್ಕೆ ಯಾಗಿದ್ದಾರೆ.
ಭಾರತೀಯ ಜನತಾ ಪಕ್ಷದ ವತಿಯಿಂದ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ವೈದ್ಯರ ಸಹಕಾರ ದೊಂದಿಗೆ ಜಿಲ್ಲೆಯ ಎಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಸೇವೆ ಯ ಜೋಡಣೆ ಯ ಸೇವಾ ಕಾಯ೯ವನ್ನು ನಡೆಸುತ್ತಿದ್ದಾರೆ.
ಕೊರೋನ ಮಹಾಮಾರಿಯ ಈ ಸಂದರ್ಭದಲ್ಲಿ ಸಮಾಜ ಮುಖೀ ಸೇವೆ ಮಾಡಲು ಮೂರು ಜವಾಬ್ದಾರಿಯನ್ನು ವಹಿಸಿಕೊಂಡಿ
ರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.