ಜಿಲ್ಲಾ ವಾರ್ತೆ

ಕನಾ೯ಟಕ ಜೈನ್ ಚಾರಿಟೇಬಲ್ ಟ್ರಸ್ಟ್ ನಿಂದ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ

ಕರ್ನಾಟಕ ಜೈನ್ ಸ್ವಯಂಸೇವಾ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ದ.ಕ ಜಿಲ್ಲಾ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಜ್ಜಿಬೆಟ್ಟು
ವಿನಲ್ಲಿ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಎ.17 ರಂದು ನಡೆಯಿತು. ಉದ್ಘಾಟನೆಯನ್ನು

ವಾಮದಪದವಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವಸುದಾ ನೆರವೇರಿಸಿ, ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷರಾದ ನೇಮಿರಾಜ ಆರಿಗರವರು ವಹಿಸಿ “ರಾಜ್ಯದಾದ್ಯಂತ ಸ್ವ ಸಹಾಯ ಸಂಘದ ಮಹಿಳೆಯರಿಗೆ ಸ್ವ ಉದ್ಯೋಗವನ್ನು ಸ್ಥಾಪಿಸುವುದೆಂದು” ತಿಳಿಸಿದರು. ಸ್ಥಾಪಿಸಿರುವ ಎಲ್ಲಾ ಕೇಂದ್ರಗಳಲ್ಲಿ 4 ಹೊಲಿಗೆ ಯಂತ್ರವನ್ನು ಟ್ರಸ್ಟ್‌ನ ವತಿಯಿಂದ ಉಚಿತವಾಗಿ ನೀಡುವುದೆಂದು ಭರವಸೆ ನೀಡಿದರು.


ಕಾರ್ಯಕ್ರಮದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಂಚಾಲಕರಾದ ವೃಷಭ ಇಂದ್ರ,ಮೂಡ
ಬಿದ್ರೆ ವಿಧಾನಸಭಾ ಕ್ಷೇತ್ರದ ಸಂಚಾಲಕರಾದ ಸುದೀಪ್ ಜೈನ್, ಟೈಲರಿಂಗ್ ತರಬೇತಿದಾರಾದ ನಯನ, ಸಂಘದ ಸರ್ವ ಸದಸ್ಯರು ಹಾಗೂ ಮತ್ತಿ
ತರರುಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂ
ಪಣೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಲಹಾ ಸಮಿತಿಯ  ಅಧ್ಯಕ್ಷ ರಾದ ಧನ್ಯಕುಮಾರಿ ಅವರು ನೆರವೇರಿಸಿದರು.

ಟೈಲರಿಂಗ್ ಮಿಷನ್‌ನ ದಾನಿಗಳು: ಶಮಂತ್ ಕುಮಾರ್ ಜೈನ್, ಬೆಳ್ತಂಗಡಿ ಹಾಗೂ ಉದಯ ವಿ.ಜೈನ್, “ಅಕ್ಷಯ ನಿಲಯ” ಕರಿಯಕಲ್ಲು ಕಾರ್ಕಳ

ನಿಮ್ಮದೊಂದು ಉತ್ತರ