ಗ್ರಾಮಾಂತರ ಸುದ್ದಿ

ರಾಜ್ಯ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ರೀರಾಮ ಕ್ಷೇತ್ರಕ್ಕೆ ಭೇಟಿ

 

 

ಧರ್ಮಸ್ಥಳ: ಕರ್ನಾಟಕ ರಾಜ್ಯ ವಿಧಾನ ಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಇಂದು    ಆ.27 ಧರ್ಮಸ್ಥಳ  ಶ್ರೀರಾಮಕ್ಷೇತ್ರಕ್ಕೆ ಭೇಟಿ ನೀಡಿದರು.

ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆಯ ಅಂಗವಾಗಿ ಶ್ರೀ ಗುರುದೇವ ಮಠಕ್ಕೆ ಭೇಟಿ ನೀಡಿದ ಅವರು ಸ್ವಾಮೀಜಿಯವರ ಪಾದಪೂಜೆ ನೇರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್, ತಹಶೀಲ್ದಾರ್ ಮಹೇಶ್ ಜೆ, ಪಾವಡಪ್ಪ ದೊಡ್ಮಿನಿ, ಪ್ರಮುಖರಾದ ಹರೀಶ್ ಸಾಲಿಯಾನ್, ಪ್ರಶಾಂತ್ ಎಂ, ಸೀತಾರಾಮ ಬೆಳಾಲು, ಶಶಿಧರ ಕಲ್ಮಂಜ, ತುಕರಾಮ ಸಾಲಿಯಾನ್, ಪಡುಮಲೆ ಟ್ರಸ್ಟ್ ಶ್ರೀಧರ ಪುತ್ತೂರು, ಉದ್ಯಮ ಅಶ್ವಥ್ ಹೆಗ್ಡೆ ಬಳಂಜ, ಅಮಿತಾ ಗೌಡ, ಸಮಿತಾ ಗೌಡ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

 

ನಿಮ್ಮದೊಂದು ಉತ್ತರ